Advertisement

ಪಾಕ್‌ ಹಾಕಿ ದಿಗ್ಗಜನಿಗೆ ಚೆನ್ನೈ ಹಾಕಿ ಅಸೋಸಿಯೇಶನ್‌ ನೆರವು

06:00 AM Apr 26, 2018 | |

ಚೆನ್ನೈ: ಭಾರತದಲ್ಲಿ ಹೃದಯದ ಕಸಿ ಮಾಡಲು ನಿರ್ಧರಿಸಿದ ಪಾಕಿಸ್ಥಾನ ಹಾಕಿ ತಂಡದ ಮಾಜಿ ನಾಯಕ ಮನ್ಸೂರ್‌ ಅಹ್ಮದ್‌ ಅವರಿಗೆ ಚೆನ್ನೈ ಹಾಕಿ ಅಸೋಸಿಯೇಶನ್‌ ನೆರವು ನೀಡಲು ಮುಂದೆ ಬಂದಿದೆ. ಅಹ್ಮದ್‌ ಅವರ ವೈದ್ಯರ ಜತೆ ಈಗಾಗಲೇ ಚೆನ್ನೈಯ ಪ್ರಮುಖ ವೈದ್ಯರು ಮಾತುಕತೆ ನಡೆಸಿದ್ದಾರೆ.

Advertisement

ಅಹ್ಮದ್‌ ಅವರ ವೈದ್ಯಕೀಯ ದಾಖಲೆ ಪತ್ರಗಳನ್ನು ಅವರ ವೈದ್ಯರು ನಮಗೆ ಕಳುಹಿಸಿದ್ದು ನೆರವು ನೀಡು ವಂತೆ ಕೇಳಿಕೊಂಡಿದ್ದಾರೆ. ನಾವು ಈ ಬಗ್ಗೆ ಗಮನ ಹರಿಸಲಿದ್ದೇವೆ ಎಂದು ಚೆನ್ನೈಯ ಹಿರಿಯ ಹೃದಯ ಕಸಿ ಸರ್ಜನ್‌ ಡಾ| ಕೆಆರ್‌ ಬಾಲಕೃಷ್ಣನ್‌ ಹೇಳಿದ್ದಾರೆ. 

1990ರ ದಶಕದಲ್ಲಿ ಅಹ್ಮದ್‌ ಪಾಕಿಸ್ಥಾನ ಹಾಕಿ ತಂಡದ ನಾಯಕರಾಗಿದ್ದರು ಮತ್ತು 1994ರಲ್ಲಿ ವಿಶ್ವಕಪ್‌ ಮತ್ತು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕ್‌ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ 10 ವರ್ಷಗಳಿಂದ ಹೃದಯದ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಹೃದಯ ಕಸಿ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next