Advertisement

ಪತ್ರಿಕೆ ಓದುತ್ತಿರುವಾಗಲೇ ಶಾಸಕ ಕನಕರಾಜು ನಿಧನ

12:30 AM Mar 22, 2019 | |

ತಮಿಳುನಾಡಿನ ಸೂಲೂರು ಕ್ಷೇತ್ರವನ್ನು ಪ್ರತಿನಿಧಿಸುವ ಆಡಳಿತಾರೂಢ ಎಐಎಡಿಎಂಕೆಯ ಶಾಸಕ ಕೆ.ಕನಕರಾಜು (67) ಗುರುವಾರ ಬೆಳಗ್ಗೆ ಪತ್ರಿಕೆ ಓದುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಅಸುನೀಗಿದ್ದಾರೆ.

Advertisement

ಸ್ವಕ್ಷೇತ್ರದಲ್ಲಿರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ಸುದ್ದಿ ಕೇಳಿ ಸ್ಥಳೀಯ ವೈದ್ಯರು ಶಾಸಕರ ನಿವಾಸಕ್ಕೆ ಧಾವಿಸಿದರೂ, ಪರೀಕ್ಷೆಯ ಬಳಿಕ ಕನಕರಾಜು ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು. ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಸೇರಿದಂತೆ ಪ್ರಮುಖರು ಶೋಕವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next