Advertisement

ತಮಿಳುನಾಡಿನಲ್ಲಿ ದೇವಾಲಯದ ಎದುರೇ AIADMK ಮುಖಂಡನ ಕೊಚ್ಚಿ ಕೊಲೆ 

12:54 PM Feb 12, 2017 | |

ತಿರುವಣ್ಣಾಮಲೈ: ಇಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ  ದೇವಾಲಯವೊಂದರ ಎದುರೇ ಎಐಎಡಿಎಂಕೆ ಮುಖಂಡನೊಬ್ಬನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈಯಲಾಗಿದೆ. 

Advertisement

ಅರುಣಾಚಲ ದೇಗುಲದ ಎದುರು ಬೆಳಿಗ್ಗೆ ವಾಕಿಂಗ್‌ ಮಾಡುತ್ತಿದ್ದ ತಿರುವಣ್ಣಾಮಲೈ ಘಟಕದ ಕಾರ್ಯದರ್ಶಿ ಕನಕರಾಜ್‌ ಎನ್ನುವವರ ಮೇಲೆ ಮೂವರು ದುಷ್ಕರ್ಮಿಗಳು ಮಾರಾಕಾಯುಧಗಳಿಂದ ಬರ್ಬರವಾಗಿ ಕೊಚ್ಚಿದ್ದಾರೆ. ಪರಿಣಾಮವಾಗಿ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಸ್ನೇಹಿತ ಕಣ್ಣದಾಸನ್‌ ಎನ್ನುವವ ಮೇಲೂ ದಾಳಿ ನಡೆಸಲಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಹತ್ಯೆಗೈದ ಬಳಿಕ ಮೂವರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಶೇಖರ್‌, ಬಾಬು ಮತ್ತು ಶರವಣ ಎನ್ನುವ ಮೂವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next