Advertisement

ಭಾರತ, ಚೀನಾ ಗಡಿ ವಿವಾದದ ಪ್ರಮುಖ ಸೂತ್ರಧಾರಿ ದೋವಲ್! ಚೀನಾ

02:44 PM Jul 25, 2017 | Team Udayavani |

ಬೀಜಿಂಗ್: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಡೋಕ್ಲಾಮ್ ಗಡಿ ಬಿಕ್ಕಟ್ಟಿನ ಹಿಂದಿನ ಪ್ರಮುಖ ಸೂತ್ರಧಾರಿ ಎಂದು ಚೀನಾ ಸ್ವಾಮಿತ್ವದ ಪತ್ರಿಕೆಯ ಸಂಪಾಕೀಯದಲ್ಲಿ ಆರೋಪಿಸಿದೆ.

Advertisement

ಅಜಿತ್ ದೋವಲ್ ಅವರು ಚೀನಾ ಭೇಟಿಗೆ 2 ದಿನ ಇರುವ ಮೊದಲೇ ಚೀನಾ ಈ ಆರೋಪವನ್ನು ಹರಿಯಬಿಟ್ಟಿದೆ. ಗ್ಲೋಬಲ್ ಟೈಮ್ಸ್ ಪತ್ರಿಕೆಯ ಸಂಪಾದಕೀಯದಲ್ಲಿ, ಚೀನಾ ಮತ್ತು ಭಾರತ ನಡುವಿನ ಗಡಿ ವಿವಾದಕ್ಕೆ ದೋವಲ್ ಪ್ರಮುಖ ಸೂತ್ರಧಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ನಂಬಲಾಗಿದೆ ಎಂದು ಹೇಳಿದೆ.

ಜು.27-28 ರಂದು ಅಜಿತ್ ದೋವಲ್ ಚೀನಾಗೆ ಭೇಟಿ ನೀಡಲಿದ್ದು, ಇದಕ್ಕೂ ಮುನ್ನ ಚೀನಾದ ವಿಶ್ಲೇಷಕರು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅಜಿತ್ ದೋವಲ್ ಭೇಟಿಯಿಂದ ಡೋಕ್ಲಾಮ್ ಬಿಕ್ಕಟ್ಟು ಬಗೆಹರಿಯಲು ಸಾಧ್ಯವಿದೆ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next