Advertisement

40 ವರ್ಷಗಳ ಬಾಂಧವ್ಯ ಅಂತ್ಯ; ಕಾಂಗ್ರೆಸ್ ಗೆ ವಿಶ್ವನಾಥ ಗುಡ್ ಬೈ

01:46 PM Jun 20, 2017 | Team Udayavani |

ಮೈಸೂರು: ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಂಸದ ಎಚ್.ವಿಶ್ವನಾಥ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿರುವುದಾಗಿ ಮಂಗಳವಾರ ಖಾಸಗಿ ಹೋಟೆಲ್ ನಲ್ಲಿ ಬೆಂಬಲಿಗರ ಸಭೆ ನಡೆಸಿದ ಬಳಿಕ ಅಧಿಕೃತವಾಗಿ ಘೋಷಿಸಿದರು. ಸುಮಾರು 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಜತೆಗಿನ ಬಾಂಧವ್ಯ ಅಂತ್ಯವಾಗಿದೆ. ಪಕ್ಷದಲ್ಲಿ ಹಿರಿಯರನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು.

Advertisement

ನೀವು ಇಷ್ಟೊಂದು ಸಣ್ಣ ಮನಸ್ಥಿತಿಯವರೆಂದು ಗೊತ್ತಿರಲಿಲ್ಲ!
ಕುರುಬ ಸಮಾಜ ನಿಮಗಾಗಿ ತನು, ಮನ ಧನ ಅರ್ಪಿಸಿದೆ. ಆದರೆ ನೀವು ಆ ಸಮುದಾಯಕ್ಕೆ ಒಂದೂ ಸಚಿವ ಸ್ಥಾನ ಕೊಟ್ಟಿಲ್ಲ. ನಿಮ್ಮನ್ನು ಬೆಳೆಸಿದ ಸಮುದಾಯವನ್ನೇ ತುಳಿಯುತ್ತಿದ್ದೀರಿ. ನೀವು ಇಷ್ಟೊಂದು ಸಣ್ಣ ಮನಸ್ಥಿತಿಯವರೆಂದು ಗೊತ್ತಿರಲಿಲ್ಲ. ಗೊತ್ತಿದ್ದರೆ ನಿಮ್ಮನ್ನು ಕಾಂಗ್ರೆಸ್ ನೊಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next