Advertisement

ಆಗುಂಬೆ ಘಾಟಿ ದುರಸ್ತಿ ಚುನಾವಣೆ ದಿನವೂ ಸಂಚಾರಕ್ಕೆ ಅವಕಾಶವಿಲ್ಲ

12:50 AM Apr 17, 2019 | sudhir |

ಹೆಬ್ರಿ: ಉಡುಪಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯ ಆಗುಂಬೆ ಘಾಟಿ ಆರಂಭದ ಹಾಗೂ 7ನೇ ತಿರುವಿನ ಗುಡ್ಡ ಕುಸಿದಿರುವುದನ್ನು ಶಾಶ್ವತವಾಗಿ ದುರಸ್ತಿಗೊಳಿಸುವ ಹಿನ್ನೆಲೆಯಲ್ಲಿ ಎ.1ರಿಂದ ಒಂದು ತಿಂಗಳು ಘಾಟಿ ಸಂಚಾರ ಬಂದ್‌ ಆಗಿದ್ದು ಚುನಾವಣೆ ದಿನವೂ ಯಾವುದೇ ವಾಹನಗಳು ಸಂಚರಿಸಲು ಅವಕಾಶವಿಲ್ಲ ಎಂದು ಹೆದ್ದಾರಿ ಎಂಜಿನಿಯರ್‌ ತಿಳಿಸಿದ್ದಾರೆ.

Advertisement

ಚುನಾವಣೆ ಹಿನ್ನೆಲೆಯಲ್ಲಿ ಎ. 18, ಎ. 23ರಂದು ಮಲೆನಾಡು, ಕರಾವಳಿ ನಡುವೆ ಸಂಚರಿಸುವ ಮತ ದಾರರಿಗೆ ತೊಂದರೆ ಯಾಗದಂತೆ ಈ 2 ದಿನ ದ್ವಿಚಕ್ರವಾಹನ ಹಾಗೂ ಲಘುವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸಾರ್ವಜನಿಕರು ವಿನಂತಿ ಸಿದ್ದುಘಾಟಿಯ ಆನೆಕಲ್ಲಿನ ಬಳಿ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ, ಮಳೆ ಬರುತ್ತಿರುವ ಕಾರಣ ಅನಾಹುತ ಸಂಭವವಿಸಬಹುದೆಂದು ಸಂಚಾರಕ್ಕೆ ಅವಕಾಶ ನೀಡಿಲ್ಲ ಎಂದು ಎಂಜಿನಿಯರ್‌ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next