Advertisement

ಪಿಯುಸಿ ಪರೀಕ್ಷೆ ಮುಗಿಯುವ ತನಕ ಆಗುಂಬೆ ಘಾಟಿ ಬಂದ್ ಇಲ್ಲ

06:59 AM Feb 28, 2019 | |

ಹೆಬ್ರಿ: ದ್ವಿತೀಯ ಪಿಯುಸಿ ಪರೀಕ್ಷೆ ಶುಕ್ರವಾರದಿಂದ ಅರಂಭಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಪೂರ್ವಯೋಜಿತ ಆಗುಂಬೆ ಘಾಟಿ ದುರಸ್ಥಿಯನ್ನು ಮುಂದೂಡಲಾಗಿದೆ. 

Advertisement

ಈ ಬಗ್ಗೆ ಹೇಳಿಕೆ ನೀಡಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಬಿ.ಕೆ.ದಯಾನಂದ್ ಅವರು, ಘಾಟಿ ದುರಸ್ಥಿ ಹಿನ್ನಲೆಯಲ್ಲಿ ಸಂಚಾರ ಸ್ಥಗಿತವಾಗುವುದರಿಂದ ಶಾಲಾ ಮಕ್ಕಳಿಗೆ ಪರೀಕ್ಷೆ ಬರೆಯಲು ಹೋಗಲು ಕಷ್ಟವಾಗುತ್ತದೆ ಎಂದು ಹಲವು ದೂರುಗಳು ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ನಾವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಮಾತಾಡಿದ್ದೇವೆ. ಪಿಯುಸಿ ಪರೀಕ್ಷೆ ಮುಗಿದ ನಂತರ ಅಂದರೆ ಮಾರ್ಚ್ 19ರ ನಂತರ ದುರಸ್ಥಿ ಕಾಮಗಾರಿ ಆರಂಭವಾಗುವುದು. ವಾಹನ ಸಂಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು. ಮಾರ್ಚ್19ರವರೆಗೆ ಪ್ರಾಧಿಕಾರ ದುರಸ್ಥಿಗೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತದೆ. ಅಲ್ಲಿಯ ತನಕ ಸಂಚಾರ ವ್ಯವಸ್ಥೆ ಸುಗಮವಾಗಿರಲಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಯವರು ಎಂದರು.

ದುರಸ್ಥಿ ಕಾರ್ಯದಿಂದ ಮಾರ್ಚ್ ತಿಂಗಳಿಡೀ ಸಂಚಾರ ಬಂದ್ ಆಗಲಿದೆ ಎಂದು ಹೇಳಲಾಗಿತ್ತು. ಇದರಿಂದಾಗಿ ಸೋಮೇಶ್ವರ, ನಾಡ್ಪಾಲು ಮುಂತಾದ ಕಡೆಗಳಿಂದ ಹೆಬ್ರಿಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಭೀತಿ ಇತ್ತು. ಈಗ ಮಾರ್ಚ್ ತಿಂಗಳಲ್ಲಿ ಸಂಚಾರಕ್ಕೆ ಯಾವುದೇ ಅಡೆತಡೆ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳಿಗೆ ರಿಲೀಫ್ ಸಿಕ್ಕಿದೆ.  

Advertisement

Udayavani is now on Telegram. Click here to join our channel and stay updated with the latest news.

Next