Advertisement

High school ವಿದ್ಯಾರ್ಥಿಗಳಿಗೆ ಕೃಷಿ ಪಾಠ

12:34 AM Nov 13, 2023 | Team Udayavani |

ಬೆಂಗಳೂರು: ಕೃಷಿಯಿಂದ ಯುವ ಜನರು ದೂರವಾಗುತ್ತಿದ್ದಾರೆ ಎಂಬ ಚರ್ಚೆಗಳ ನಡುವೆಯೇ ಮುಂದಿನ ವರ್ಷದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕೃಷಿಯನ್ನು ಪಠ್ಯವನ್ನಾಗಿ ಸೇರ್ಪಡೆ ಮಾಡುವ ಪ್ರಯತ್ನವನ್ನು ಸಮಗ್ರ ಶಿಕ್ಷಣ ಕರ್ನಾಟಕ ಇಲಾಖೆ ನಡೆಸುತ್ತಿದೆ. ಆಯ್ದ ಕೆಲವು ಶಾಲೆಗಳಲ್ಲಿ ತೃತೀಯ ಭಾಷೆಯ ಬದಲು ಕೃಷಿಯನ್ನು ಒಂದು ವಿಷಯವನ್ನಾಗಿ ಪರಿಗಣಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.

Advertisement

ರಾಜ್ಯದಲ್ಲಿ 267 ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜುಗಳಲ್ಲಿ ಈಗಾಗಲೇ ರಾಷ್ಟ್ರೀಯ ವೃತ್ತಿ ಶಿಕ್ಷಣ ಕೌಶಲ ಚೌಕಟ್ಟು (ಎನ್‌ಎಸ್‌ಕ್ಯುಎಫ್) ಪಠ್ಯ ಅಳವಡಿಸಲಾಗಿದೆ. ಈ ಶಾಲೆಗಳಲ್ಲಿ 9ನೇ ತರಗತಿಯ ಬಳಿಕ ತೃತೀಯ ಭಾಷೆಯ ಬದಲು ಮಾಹಿತಿ ತಂತ್ರಜ್ಞಾನ, ಅಟೋಮೊಬೈಲ್‌, ಬ್ಯೂಟಿ ಮತ್ತು ವೆಲ್‌ನೆಸ್‌ ಇತ್ಯಾದಿ ಕಲಿಯಲು ಅವಕಾಶ ನೀಡಲಾಗಿದೆ. ಇನ್ನು ಕೃಷಿಯೂ ಸೇರ್ಪಡೆಯಾಗಲಿದೆ.ಕೃಷಿ ಕ್ಷೇತ್ರದಲ್ಲಿ ಕೌಶಲದ ಅಗತ್ಯ ಮತ್ತು ಈ ವಲಯ ದಲ್ಲಿ ಉದ್ಯೋಗ ಅವಕಾಶಗಳನ್ನು ಗಮನಿಸಿ ಕೃಷಿ ಸೇರ್ಪಡೆಗೆ ರಾಜ್ಯ ಸರಕಾರ ತೀರ್ಮಾನಿಸಿದೆ.

ಕೃಷಿಯಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈ ಕೋರ್ಸ್‌ ಹೆಚ್ಚು ಪ್ರಯೋಜನ ಕಾರಿಯಾಗಲಿದೆ. ಜತೆಗೆ ಕೃಷಿ ಸಂಬಂಧಿ ಉದ್ದಿಮೆಗಳು, ಕೃಷಿ ಯಂತ್ರೋಪಕರಣಗಳ ನಿರ್ವಹಣೆ, ಬಳಕೆಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಉದ್ಯೋಗ ಮಾರುಕಟ್ಟೆ ಸೃಷ್ಟಿಯಾಗಲಿದೆ. ಮಣ್ಣಿನ ಪರೀಕ್ಷೆ, ನೀರಿನ ನಿರ್ವಹಣೆ, ಯಾವ ಮಣ್ಣಿನಲ್ಲಿ ಯಾವ ಕೃಷಿ ಮಾಡಬೇಕು, ನೀರು ಎಷ್ಟು ಬಳಕೆ ಮಾಡಬೇಕು ಎಂಬಿತ್ಯಾದಿ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲು 29 ಕಾಲೇಜುಗಳಲ್ಲಿ ಜಾರಿ
ಆರಂಭಿಕ ಹಂತದಲ್ಲಿ 29 ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿ ಕೃಷಿಯನ್ನು ಒಂದು ವಿಷಯವನ್ನಾಗಿ ಕಲಿಸಲು ತಯಾರಿ ನಡೆಸ ಲಾಗಿದೆ. 2024-25ರ ಸಾಲಿನಿಂದ ಕೃಷಿ ಚಟುವಟಿಕೆಯನ್ನು ಪಠ್ಯಕ್ಕೆ ಸೇರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವ ವಿದ್ಯಾರ್ಥಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮತ್ತು ಕೌಶಲ ಪರಿಷತ್‌ ಜಂಟಿ ಪ್ರಮಾಣಪತ್ರ ನೀಡುತ್ತದೆ. ಇದರ ಆಧಾರದಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ.

Advertisement

ಹೆಚ್ಚುತ್ತಿರುವ ಬೇಡಿಕೆ
ಕೋರ್ಸ್‌ನಲ್ಲಿ 9ನೇ ತರಗತಿಯನ್ನು ಲೆವೆಲ್‌ 1 ಮತ್ತು 10ನೇ ತರಗತಿಯನ್ನು ಲೆವೆಲ್‌ 2, ಪಿಯು ಮೊದಲ ವರ್ಷ ಲೆವೆಲ್‌ 3 ಮತ್ತು 2ನೇ ವರ್ಷ ಲೆವಲ್‌ 4 ಎಂದು ಪರಿಗಣಿಸಲಾಗುತ್ತದೆ. ರಾಜ್ಯದಲ್ಲಿ ಎನ್‌ಎಸ್‌ಕ್ಯುಎಫ್ ಅಳವಡಿಸಿಕೊಳ್ಳು ತ್ತಿರುವ ಶಾಲೆಗಳ ಸಂಖ್ಯೆ ಮತ್ತು ವಿಷಯ ವನ್ನು ಆಯ್ದುಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. 2021-22ನೇ ಸಾಲಿನಲ್ಲಿ 16,743 ವಿದ್ಯಾರ್ಥಿ ಗಳು ನೋಂದಾಯಿಸಿಕೊಂಡಿ ದ್ದರು. 2022-23ರ ಸಾಲಿನಲ್ಲಿ 21,514 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿ ದ್ದಾರೆ. ನೋಂದಣಿ ಶೇ. 20ರಷ್ಟು ಏರಿದೆ.

ಕೃಷಿಯನ್ನು ಒಂದು ವಿಷಯವನ್ನಾಗಿ ಪರಿಗಣಿಸಲು ನಾವು ಸಿದ್ಧ. ನಮ್ಮ ಎನ್‌ಎಸ್‌ಕ್ಯುಎಫ್ ಕೋರ್ಸ್‌ಗಳಿಗೆ ಉತ್ತಮ ಬೇಡಿಕೆಯಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಅಭ್ಯಾಸ ಮಾಡುತ್ತಿದ್ದಾರೆ.
– ಕೆ.ಎನ್‌. ರಮೇಶ್‌, ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ

- ರಾಕೇಶ್‌ ಎನ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next