Advertisement

ಅರಣ್ಯದಲ್ಲಿ ಕೃಷಿ; ಜಮೀನು ಡಿನೋಟಿಫೈ ಮಾಡಿ: ಸಂಸದ ರಾಘವೇಂದ್ರ

01:47 AM Dec 22, 2022 | Team Udayavani |

ಹೊಸದಿಲ್ಲಿ: ಅರಣ್ಯ ಪ್ರದೇಶದಲ್ಲಿ ಕೃಷಿ ಮಾಡಿದ ಜಮೀನನ್ನು ಡಿನೋಟಿಫೈ ಮಾಡಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಆಗ್ರಹಿಸಿದ್ದಾರೆ. ಇದರಿಂದಾಗಿ ಶರಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡಿದ್ದರಿಂದ ನಿರ್ವಸಿತರಾದವರಿಗೆ ನೆರವಾಗಲಿದೆ ಎಂದರು.

Advertisement

ಲೋಕಸಭೆಯಲ್ಲಿ ಬುಧವಾರ ಮಾತನಾಡಿದ ಅವರು, “ಅಣೆಕಟ್ಟು ನಿರ್ಮಾಣದಿಂದ ನಿರ್ವಸಿತರಾದವರಿಗೆ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಗೆ ಒಳಪಟ್ಟ ಅರಣ್ಯ ಪ್ರದೇಶದ 31 ವಿವಿಧ ಸ್ಥಳಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ನೀಡಲಾಗಿತ್ತು. ಈ ಬಗ್ಗೆ ಕೇಂದ್ರ ಸರಕಾರ ರಾಜ್ಯ ಸರಕಾರದಿಂದ ಸಮಗ್ರ ವರದಿ ಪಡೆದುಕೊಂಡು, ರೈತರಿಗೆ ಜಮೀನಿನ ಹಕ್ಕುಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೃಷಿ ಮಾಡಿದ ಅರಣ್ಯ ಜಮೀನನ್ನು ಆಯಾ ವ್ಯಕ್ತಿಗಳಿಗೇ ನೀಡುವ ಬಗ್ಗೆ ಡಿನೋಟಿಫೈ ಮಾಡಬೇಕು. ಇದರಿಂದ ಅವರಿಗೆ ಅನುಕೂಲ ವಾಗಲಿದೆ ಎಂದು ಬಿ.ವೈ. ರಾಘವೇಂದ್ರ ಅವರು ಪ್ರತಿಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next