Advertisement

ಗದ್ದೆಗಳಿಗೆ ಭೇಟಿ ನೀಡಿದ ಕೃಷಿ ವಿಜ್ಞಾನಿಗಳು

04:20 PM Feb 27, 2020 | Suhan S |

ಗಂಗಾವತಿ: ತಾಲೂಕಿನ ಕೆಲ ಪ್ರದೇಶಗಳಲ್ಲಿ ಬೇಗನೆ ತೆನೆ ಬಿಚ್ಚಿದ ಭತ್ತದ ಗದ್ದೆಗಳಿಗೆ ಕೃಷಿ ವಿಜ್ಞಾನಿಗಳು ಮತ್ತು ಕೃಷಿ ತಾಂತ್ರಿಕ ಸಲಹೆಗಾರರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಈ ಭಾರಿ ಬೇಸಿಗೆಯ ಭತ್ತದ ಬೆಳೆ ನಾಟಿ ಮಾಡಿದ 25 ದಿನಕ್ಕೆ ತೆನೆ ಬಿಚ್ಚುವ ಮೂಲಕ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮೂಡಿದೆ. ಬೇಸಿಗೆಯಲ್ಲಿ ನೀರಿನ ತೊಂದರೆ ಇತರೆ ಕಾರಣಕ್ಕೆ ರೈತರು 90-120 ದಿನಗಳಲ್ಲಿ ಕಟಾವಿಗೆ ಬರುವ ಭತ್ತ ನಾಟಿ ಮಾಡುತ್ತಾರೆ. ಪ್ರತಿ ವರ್ಷ ಬೇಸಿಗೆ ಭತ್ತದ ಬೆಳೆ ಹೆಚ್ಚು ಖರ್ಚಿಲ್ಲದೇ ರೈತರ ಕೈ ಸೇರುತ್ತಿತ್ತು. ಈ ಭಾರಿಹವಾಮಾನ ವೈಫರಿತ್ಯದಿಂದ ತೆನೆ ಬೇಗನೆ ಬಿಚ್ಚಿದೆ.

ಭತ್ತ ಬೆಳವಣಿಗೆ ಇಲ್ಲದ ಕಾರಣ ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಹಾಕಿ ರೈತರು ಹಣ ಖರ್ಚು ಮಾಡಿಕೊಂಡಿದ್ದರೂ ಭತ್ತ ಬೆಳವಣಿಗೆ ಕಂಡಿಲ್ಲ. ಇದರಿಂದ ಸಂಕಷ್ಟಕ್ಕೊಳಗಾದ ರೈತರು ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಸಂಶೋಧನಾ ಕೇಂದ್ರದ ಕೃಷಿ ತಜ್ಞರು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ತಜ್ಞ ವಿಜ್ಞಾನಿಗಳು ರೈತರ ಗದ್ದೆಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ರಾಯಚೂರು ಕೃಷಿ ವಿವಿಯ ವಿಜ್ಞಾನಿಗಳಾದ ಡಾ| ಬಿ.ಆರ್‌.ಪಾಟೀಲ್‌, ಡಾ|ಶಾಂತಪ್ಪ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ| ಮಸ್ತಾನರೆಡ್ಡಿ, ಡಾ|ಮಹಾಂತ ಶಿವಯೋಗಿ, ಡಾ| ಸುಜಯ್‌ ಹುರುಳಿ, ಡಾ|ರಾಧಾ ಮತ್ತು ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಜಂಗಮರ ಕಲ್ಗುಡಿ ಗ್ರಾಮದ ಭತ್ತದ ಗದ್ದೆಗೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next