Advertisement

ವಿವಾದಿತ ಕೋಟೆಯಲ್ಲಿ ಮತ್ತೆ ಕಿಡಿಗೇಡಿಗಳ ಕೃತ್ಯ

11:44 AM Nov 06, 2017 | Team Udayavani |

ಶಹಾಬಾದ: ನಗರದ ಹಳೇಶಹಾಬಾದನಲ್ಲಿರುವ ವಿವಾದಿತ ಐತಿಹಾಸಿಕ ಕೋಟೆಯಲ್ಲಿ ರವಿವಾರ ಮತ್ತೆ ಕಿಡಿಗೇಡಿಗಳು ಕೋಟೆಯಲ್ಲಿ ಪೇಚಿಂಗ್‌ ಕಲ್ಲಿನ ಕಟ್ಟೆ ಕಟ್ಟಿ, ಅದರ ಮೇಲೆ ಗುಂಡು ಕಲ್ಲನ್ನಿಟ್ಟು , ವಿಭೂತಿ ಹಚ್ಚಿದ್ದರಿಂದ ನಗರದ ಹಳೆಶಹಾಬಾದನಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.

Advertisement

ಹಳೆಶಹಾಬಾದನ ವಿವಾದಿತ ಕೋಟೆಯಲ್ಲಿ ಕಳೆದ ಅಕ್ಟೋಬರ್‌ 20 ರಂದು ಈ ವಿವಾದಿತ ಸ್ಥಳದಲ್ಲಿ ಮೂರ್ತಿ ಕಟ್ಟೆ ಕಟ್ಟಿ ಅದರ ಮೇಲೆ ಕಿಡಿಗೇಡಿಗಳು ಈಶ್ವರ ಲಿಂಗ ಹಾಗೂ ನಂದಿ ಬಸವಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಬಾಳೆದಿಂಡು, ಹೂಗಳಿಂದ ಪೂಜೆ ಸಲ್ಲಿಸಿದ್ದರು. ಇದರಿಂದ ಹಳೆಶಹಾಬಾದನಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಇದನ್ನು ಅರಿತ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿತ್ತು.

ರವಿವಾರ ಮತ್ತೆ ಈ ಹಿಂದೆ ತೆರವುಗೊಳಿಸಿದ್ದ ಅದೇ ಸ್ಥಳದಲ್ಲಿ ಮತ್ತೆ ಪೇಚಿಂಗ್‌ ಕಲ್ಲಿನ ಕಟ್ಟೆ ಕಟ್ಟಿ, ಕಪ್ಪು ಬಣ್ಣದ ಕಲ್ಲಿಗೆ ವಿಭೂತಿ ಹಚ್ಚಿ ಕಟ್ಟೆ ಮೇಲೆ ಇಟ್ಟಿದ್ದಾರೆ. ಈ ಸಂಬಂಧ ಹೆಚ್ಚುವರಿ ಎಸ್‌ಪಿ ಜಯಪ್ರಕಾಶ, ತಹಶೀಲ್ದಾರ ರವೀಂದ್ರ
ಧಾಮಾ, ಡಿವೈಎಸ್‌ಪಿ ಕೆ.ಬಸವರಾಜ, ಸಿಪಿಐ ಅಸ್ಲಾಂ ಭಾಷಾ, ಉಪತಹಶೀಲ್ದಾರ ಮಲ್ಲಿಕಾರ್ಜುನ ಶಿವಪುರೆ, ಕಂದಾಯ ಅಧಿಕಾರಿ ಮೋತಿಲಾಲ ಚವ್ಹಾಣ ಹಾಗೂ ಇತರ ಅಧಿಕಾರಿಗಳು ವಿವಾದಿತ ಸ್ಥಳಕ್ಕೆ ಭೇಟಿ ನೀಡಿ, ಕಟ್ಟೆಯನ್ನು
ತೆರವುಗೊಳಿಸಿದ್ದಾರೆ. 

ಪೊಲೀಸ್‌ ಕಾವಲು: ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಳೆಶಹಾಬಾದನ ಕೋಟೆಯ
ಸುತ್ತಮುತ್ತ, ಜಾಕೀರ್‌ ಹುಸೇನ್‌ ವೃತ್ತದಲ್ಲಿ ಪೊಲೀಸ್‌ರನ್ನು ಕಾವಲಿಗೆ ಹಾಕಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next