Advertisement

ಶೆಟ್ಟರ್‌ ಗೆದ್ದ ಬಳಿಕ ಅವರ ಮನೆ ವಿಳಾಸವನ್ನು ಸಚಿವೆ ಲಕ್ಷ್ಮೀ ಹುಡುಕುತ್ತಾರೆ: ಬಾಲಚಂದ್ರ

11:47 PM Apr 01, 2024 | Team Udayavani |

ಬೆಳಗಾವಿ: ಬೆಳಗಾವಿ ಲೋಕಸಭೆಯಿಂದ ಜಗದೀಶ ಶೆಟ್ಟರ್‌ ಗೆದ್ದು ಕೇಂದ್ರ ಸಚಿವರಾದ ಬಳಿಕ ಎಲ್ಲರೂ ಅವರ ಮನೆ ವಿಳಾಸ ಹುಡುಕಿಕೊಂಡು ಹೋಗುತ್ತಾರೆ. ಈಗ ವಿಳಾಸ ಕೇಳುವ ಲಕ್ಷ್ಮೀ ಹೆಬ್ಬಾಳ್ಕರ್‌ ಆಗ ಶೆಟ್ಟರ್‌ ಮನೆ ಹುಡುಕಬೇಕಾಗುತ್ತದೆ ಎಂದು ಅರಭಾವಿ ಶಾಸಕ, ಬೆಳಗಾವಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಜಗದೀಶ ಶೆಟ್ಟರ್‌ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ಶೆಟ್ಟರ್‌ ಗೆದ್ದ ಬಳಿಕ ಕೇಂದ್ರ ಸಚಿವರಾದರೆ ಎಲ್ಲರೂ ಅವರ ಮನೆಗೆ ಹೋಗಬೇಕಾಗುತ್ತದೆ. ಸುರೇಶ ಅಂಗಡಿ ಮನೆಯೇ ಶೆಟ್ಟರ್‌ ಅವರ ವಿಳಾಸ. ಶೆಟ್ಟರ್‌ ಗೆದ್ದು ಕೇಂದ್ರ ಸಚಿವರಾಗಲಿ ಎಂಬುದು ನಮ್ಮ ಆಸೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next