Advertisement

Ramesh ಮಾತಾಡಿದರೆ ಟಿಆರ್‌ಪಿ ಹೆಚ್ಚಾಗುತ್ತದೆ: ಬಾಲಚಂದ್ರ ಜಾರಕಿಹೊಳಿ

12:16 AM Apr 02, 2024 | Team Udayavani |

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಬಿಜೆಪಿ ಪ್ರಚಾರಕ್ಕೆ ಕರೆದಿಲ್ಲ. ನಮ್ಮ ಕ್ಷೇತ್ರ ಬೆಳಗಾವಿ. ಇಲ್ಲಷ್ಟೇ ಕೆಲಸ ಮಾಡುತ್ತೇವೆ. ನಾವು ಅರಭಾವಿ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ನಮ್ಮನ್ನು ಜಿಲ್ಲಾ ನಾಯಕರು ಅಂತ ಕರೆಯಬೇಡಿ. ಚಿಕ್ಕೋಡಿಯಲ್ಲಿ ಅನೇಕ ಜನ ನಮ್ಮ ನಾಯಕರು, ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ನಾನು ಹಾಗೂ ಸಹೋದರ ರಮೇಶ ಜಾರಕಿಹೊಳಿ ಬೆಳಗಾವಿಗೆ ಒತ್ತು ನೀಡುತ್ತಿದ್ದೇವೆ.

Advertisement

ಮಾಧ್ಯಮಗಳ ಕೈಗೆ ಸಿಗದಂತೆ ರಮೇಶ ಜಾರಕಿಹೊಳಿಯನ್ನು ವಿನಂತಿಸಿಕೊಂಡಿದ್ದೇನೆ. ರಮೇಶ ಮಾತನಾಡಿದರೆ ಟಿಆರ್‌ಪಿಯೂ ಹೆಚ್ಚಾಗುತ್ತದೆ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬುದು ಲೆಕ್ಕಕ್ಕೆ ಸಿಗುವುದಿಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next