Advertisement

ಮೇವು ಹಗರಣದ ತೀರ್ಪು; ಮಂಡೇಲಾ, ಅಂಬೇಡ್ಕರ್ ಗೆ ಹೋಲಿಸಿಕೊಂಡ ಲಾಲು!

06:06 PM Dec 23, 2017 | Team Udayavani |

ನವದೆಹಲಿ: ಬಹುಕೋಟಿ ಮೇವು ಹಗರಣದ ಪ್ರಕರಣದಲ್ಲಿ ಸಿಬಿಐ ವಿಶೇಷ ಕೋರ್ಟ್ ಶನಿವಾರ ದೋಷಿ ಎಂದು ತೀರ್ಪು ನೀಡಿದ ಬೆನ್ನಲ್ಲೇ ಬಿಹಾರ ಮಾಜಿ ಸಿಎಂ ಲಾಲುಪ್ರಸಾದ್ ಯಾದವ್ ತನ್ನನ್ನು ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಗೆ ಹೋಲಿಸಿಕೊಂಡು ಟ್ವೀಟ್ ಮಾಡಿದ್ದಾರೆ.

Advertisement

ಇತಿಹಾಸ ಮಂಡೇಲಾ, ಅಂಬೇಡ್ಕರ್, ಮಾರ್ಟಿನ್ ಅವರನ್ನು ವಿಲನ್ ಗಳಂತೆ ಬಿಂಬಿಸಿವೆ. ಅರ್ಧವಿಲ್ಲದ ಜನಾಂಗೀಯ ಹಾಗೂ ಜಾತಿಯ ಮನೋಭಾವವುಳ್ಳ ಮನಸ್ಸುಗಳಲ್ಲಿ ಈಗಲೂ ಅವರು ವಿಲನ್ ಗಳಾಗಿ ಉಳಿದಿದ್ದಾರೆ. ಇದರಲ್ಲಿ ಯಾರೂ ಬೇರೆ ವಿಧದವಾಗಿ ಅರ್ಥೈಸಲಾರರು ಎಂದು ಲಾಲೂ ತಿಳಿಸಿದ್ದಾರೆ.

ಬಹುಕೋಟಿ ಮೇವು ಹಗರಣದಲ್ಲಿ ಸಿಬಿಐ ಕೋರ್ಟ್ ದೋಷಿ ಎಂದು ತೀರ್ಪು ನೀಡಿದ ನಂತರ ಲಾಲು ಅವರು ಸರಣಿ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.ಈ ತೀರ್ಪು ತನ್ನ ವಿರುದ್ಧದ ವ್ಯವಸ್ಥಿತ ಷಡ್ಯಂತ್ರ ಎಂದು ಹೇಳಿರುವ ಅವರು, ಸತ್ಯ ಬಯಲಾಗಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಲಾಲು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next