Advertisement

1950ರ ನಂತರ ಮಳೆಗೆ 69 ಸಾವಿರ ಮಂದಿ ಬಲಿ

11:59 AM Oct 06, 2017 | Sharanya Alva |

ನವದೆಹಲಿ: ಸ್ವಾತಂತ್ರ್ಯಾ ನಂತರದಲ್ಲಿ ಮಧ್ಯ ಭಾರತ ಭಾರಿ ಮಳೆಯಿಂದಾಗಿ ಹೆಚ್ಚು ಹಾನಿಗೊಳಗಾಗಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. 1950 ರಿಂದ ಇಲ್ಲಿವರೆಗಿನ ಕೇಸ್‌ ಸ್ಟಡಿ ನಡೆಸಿರುವ ಭಾರತ, ಅಮೆರಿಕ ಮತ್ತು ಫ್ರಾನ್ಸ್‌ನ ಹವಾಮಾನ ತಜ್ಞರು ಈ ವಿಷಯ  ಬಹಿರಂಗಪಡಿಸಿದ್ದು ಇಲ್ಲಿವರೆಗೆ ಸುಮಾರು 69 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದಿದ್ದಾರೆ. ಇದಷ್ಟೇ ಅಲ್ಲ ಸುಮಾರು 1.70 ಕೋಟಿ ಮಂದಿ ಮನೆ ಕಳೆದುಕೊಂಡಿದ್ದಾರೆ ಎಂದೂ ಹೇಳಿದ್ದಾರೆ. 

Advertisement

ಮಳೆಯಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳೆಂದರೆ ಉತ್ತರ ಕರ್ನಾಟಕ, ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಡ, ತೆಲಂಗಾಣದ, ಗೋವಾ ಮತ್ತು ದಕ್ಷಿಣ ಕೇರಳ ಎಂದು ನೇಚರ್‌ ಕಮ್ಯೂನಿಕೇಶನ್‌ ಎಂಬ ಪತ್ರಿಕೆಯಲ್ಲಿ ಬರೆದಿದ್ದಾರೆ. 1950 ರಿಂದ 2015ರ ವರೆಗೆ ದೇಶದಲ್ಲಿ 268 ಪ್ರವಾಹ ಪ್ರಕರಣಗಳಾಗಿವೆ.

ಇದರಿಂದಾಗಿ 8.25 ಕೋಟಿ ಮಂದಿಗೆ ಇದರ ಬಿಸಿ ತಟ್ಟಿದ್ದರೆ, 1.70 ಕೋಟಿ ಮಂದಿ ಮನೆ ಕಳೆದುಕೊಂಡಿದ್ದಾರೆ ಎಂದು ಬರೆಯಲಾಗಿದೆ. ಅಲ್ಲದೆ, ಈ ಪ್ರವಾಹಗಳಿಂದಾಗಿ ಭಾರತ ಸುಮಾರು 3 ಶತಕೋಟಿ ಡಾಲರ್‌ ಹಣ ಕಳೆದುಕೊಂಡಿದೆ ಎಂದಿದೆ. ಅಂದರೆ ಜಗತ್ತಿನ ಆರ್ಥಿಕತೆಯ ಶೇ.10 ರಷ್ಟು. 

Advertisement

Udayavani is now on Telegram. Click here to join our channel and stay updated with the latest news.

Next