Advertisement

Kirti Chakra ಪಡೆದ ಬಳಿಕ ಸೊಸೆಯ ವಿರುದ್ದ ಕ್ಯಾ.ಅಂಶುಮಾನ್ ಹೆತ್ತವರ ಆರೋಪಗಳ ಸುರಿಮಳೆ

11:55 AM Jul 12, 2024 | Team Udayavani |

ಹೊಸದಿಲ್ಲಿ: ಕೆಲ ದಿನಗಳ ಹಿಂದಷ್ಟೇ ತನ್ನ ಮಗ ಅಂಶುಮಾನ್ ಸಿಂಗ್ (Captain Anshuman Singh) ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿ ಅವರು ಪ್ರದಾನಿಸಿದ ಕೀರ್ತಿ ಚಕ್ರ (Kirti Chakra) ಪ್ರಶಸ್ತಿಯನ್ನು ಸೊಸೆ ಸ್ಮೃತಿ ತನ್ನೊಂದಿಗೆ ಕೊಂಡೊಯ್ದಿದ್ದಾರೆ ಎಂದು ಅಂಶುಮನ್ ತಂದೆ ಆರೋಪಿಸಿದ್ದಾರೆ.

Advertisement

ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್ ನ ಭಾರತೀಯ ಸೇನಾ ಕ್ಯಾಂಪ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅಸುನೀಗಿದ್ದರು. ಅಗ್ನಿ ಕೆನ್ನಾಲಿಗೆಯಿಂದ ಇತರರನ್ನು ರಕ್ಷಿಸುವ ವೇಳೆ ಅಂಶುಮನ್ ಸಿಂಗ್ ಹುತಾತ್ಮರಾಗಿದ್ದರು. ಕೆಲ ದಿನಗಳ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೀರ್ತಿ ಚಕ್ರ ಪ್ರಶಸ್ತಿ ನೀಡಿ ಮರಣೋತ್ತರ ಗೌರವ ನೀಡಿದ್ದರು.

ಇದೀಗ ಸುದ್ದಿವಾಹಿನಿ ಜತೆ ಮಾತನಾಡಿದ ಅಂಶುಮಾನ್ ತಂದೆ ರವಿಪ್ರತಾಪ್ ಸಿಂಗ್ ಅವರು, ತಮ್ಮ ಪುತ್ರನಿಗೆ ಮರಣೋತ್ತರವಾಗಿ ಸರ್ಕಾರ ನೀಡಿದ ಕೀರ್ತಿ ಚಕ್ರವನ್ನು ಅವರ ಸೊಸೆ ಸ್ಮೃತಿ ಅವರ ಫೋಟೋ ಆಲ್ಬಮ್, ಬಟ್ಟೆ ಮತ್ತು ಇತರ ನೆನಪುಗಳೊಂದಿಗೆ ಗುರುದಾಸ್‌ಪುರದ ಮನೆಗೆ ತೆಗೆದುಕೊಂಡು ಹೋದರು ಎಂದು ಹೇಳಿಕೊಂಡಿದ್ದಾರೆ.

“ನಾವು ಅಂಶುಮಾನ್ ಅವರನ್ನು ಸ್ಮೃತಿಯೊಂದಿಗೆ ವಿವಾಹ ಮಾಡಿದ್ದೆವು. ಮದುವೆಯ ನಂತರ, ಅವರು ನನ್ನ ಮಗಳೊಂದಿಗೆ ನೋಯ್ಡಾದಲ್ಲಿ ಇರಲು ಪ್ರಾರಂಭಿಸಿದರು. ಜುಲೈ 19, 2023 ರಂದು, ಅಂಶುಮಾನ್ ಸಾವಿನ ಬಗ್ಗೆ ನಮಗೆ ಮಾಹಿತಿ ಬಂದಾಗ, ನಾನು ಅವರನ್ನು ಲಕ್ನೋಗೆ ಕರೆದಿದ್ದೆ, ಆದರೆ ಅಂತ್ಯಕ್ರಿಯೆಯ ನಂತರ ಅವಳು (ಸ್ಮೃತಿ) ಗುರುದಾಸ್‌ಪುರಕ್ಕೆ ಹಿಂತಿರುಗಿದಳು” ಎಂದು ರವಿ ಪ್ರತಾಪ್ ಸಿಂಗ್ ತಿಳಿಸಿದರು.

Advertisement

ಅಂಶುಮಾನ್ ಅವರಿಗೆ ಕೀರ್ತಿ ಚಕ್ರ ನೀಡಿದಾಗ, ಆತನ ತಾಯಿ ಮತ್ತು ಸ್ಮೃತಿ ಗೌರವ ಸ್ವೀಕರಿಸಲು ತೆರಳಿದ್ದರು. ರಾಷ್ಟ್ರಪತಿಗಳು ನನ್ನ ಮಗನ ತ್ಯಾಗಕ್ಕೆ ಕೀರ್ತಿ ಚಕ್ರ ನೀಡಿ ಗೌರವಿಸಿದರು, ಆದರೆ ನನಗೆ ಅದನ್ನು ಒಮ್ಮೆಯೂ ಮುಟ್ಟಲು ಸಾಧ್ಯವಾಗಲಿಲ್ಲ ಎಂದು ರವಿ ಪ್ರತಾಪ್ ಸಿಂಗ್ ಹೇಳಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ನೆನಪಿಸಿಕೊಂಡ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಾಯಿ ಮಂಜು, “ಜುಲೈ 5 ರಂದು ರಾಷ್ಟ್ರಪತಿ ಭವನದಲ್ಲಿ ಸ್ಮೃತಿ ಅವರೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದೆವು, ನಾವು ಕಾರ್ಯಕ್ರಮದಿಂದ ಹೊರಡುವಾಗ, ಸೇನಾಧಿಕಾರಿಗಳ ಹೇಳಿಕೆಯ ಮೇರೆಗೆ ನಾನು ಫೋಟೋಗಾಗಿ ಕೀರ್ತಿ ಚಕ್ರವನ್ನು ಹಿಡಿದಿದ್ದೇನೆ. ಆದರೆ ಅದರ ನಂತರ, ಸ್ಮೃತಿ ನನ್ನ ಕೈಯಿಂದ ಕೀರ್ತಿ ಚಕ್ರವನ್ನು ತೆಗೆದುಕೊಂಡಳು” ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next