Advertisement

ಪ್ರಣಬ್‌ ಬಳಿಕ ಈಗ ರತನ್‌ ಟಾಟಾ: ಭಾಗವತ್‌ ಜತೆ ಒಂದೇ ವೇದಿಕೆಯಲ್ಲಿ

05:12 PM Jul 10, 2018 | Team Udayavani |

ಹೊಸದಿಲ್ಲಿ : ವ್ಯಾಪಕ ಪ್ರತಿಭಟನೆ ಮತ್ತು ಟೀಕೆಗಳ ಹೊರತಾಗಿಯೂ ನಾಗ್ಪುರದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರು ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಿನಗಳ ಬಳಿಕ ಇದೀಗ ದೇಶದ ಪ್ರಖ್ಯಾತ ಉದ್ಯಮಿ ರತನ್‌ ಟಾಟಾ ಅವರು ಮುಂಬಯಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

Advertisement

ಆಗಸ್ಟ್‌ 24ರಂದು ಮುಂಬಯಿಯಲ್ಲಿ, ಆರ್‌ಎಸ್‌ಎಸ್‌ಗೆ ಸಂಯೋಜಿತವಾಗಿರುವ ನಾನಾ ಪಾಲ್ಕರ್‌ ಸ್ಮ್ರತಿ  ಸಮಿತಿಯು ಏರ್ಪಡಿಸಲಿರುವ ಕಾರ್ಯಕ್ರಮದಲ್ಲಿ ಟಾಟಾ ಮತ್ತು ಭಾಗವತ್‌ ಅವರು ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ. 

ಆರ್‌ಎಸ್‌ಎಸ್‌ ಸಂಯೋಜಿತ ಎನ್‌ಜಿಓ ಮಾಡಿರುವ ಸಮಾಜ ಕಲ್ಯಾಣ ಸೇವೆಗಳ ಬಗ್ಗೆ ರತನ್‌ ಟಾಟಾ ಅವರಿಗೆ ತಿಳಿವಳಿಕೆ ಇರುವುದರಿಂದಲೇ ಅವರು ಭಾಗವತ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ ಎಂದು ಸಂಘ ಕಾರ್ಯಕರ್ತರನ್ನು ಉಲ್ಲೇಖೀಸಿ ಪಿಟಿಐ ವರದಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next