Advertisement

ವಿಶೇಷ ಅಧಿವೇಶನಕ್ಕೆ ಜೈರಾಂ ರಮೇಶ್‌ಆಗ್ರಹ

07:00 AM Apr 08, 2018 | |

ಹೊಸದಿಲ್ಲಿ: ಬಜೆಟ್‌ ಅಧಿವೇಶನದ ಎರಡನೇ ಚರಣ ಸಂಪೂರ್ಣವಾಗಿ ವ್ಯರ್ಥವಾಗಿದ್ದರಿಂದಾಗಿ ಬಾಕಿ ಉಳಿದಿರುವ ಪ್ರಮುಖ ಮಸೂದೆಗಳು ಹಾಗೂ ವಿಷಯಗಳ ಚರ್ಚೆಗಾಗಿ ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯನಾಯ್ಡುಗೆ ಕಾಂಗ್ರೆಸ್‌ ಮುಖಂಡ ಜೈರಾಂ ರಮೇಶ್‌ ಪತ್ರ ಬರೆದು ಕೇಳಿಕೊಂಡಿದ್ದಾರೆ.

Advertisement

ವಿಶೇಷ ಅಧಿವೇಶನವು ಜನರಲ್ಲಿ ಸಂಸತ್‌ ಬಗ್ಗೆ ಧನಾತ್ಮಕ ಭಾವನೆ ಮೂಡಿಸಲಿದೆ. ಮೇ ಅಥವಾ ಜೂನ್‌ ಮೊದಲ ವಾರದಲ್ಲಿ ಅಧಿವೇಶನ ಕರೆಯುವಂತೆ ಸರಕಾರವನ್ನು ನೀವು ಯಾಕೆ ಮನವೊಲಿಸಬಾರದು ಎಂದು ಅವರು ಕೇಳಿದ್ದಾರೆ. ಆದರೆ ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ ಎಂದೂ ಅವರು ಹೇಳಿದ್ದಾರೆ. ಜುಲೈ ಎರಡನೇ ವಾರದಲ್ಲಿ ಸಾಮಾನ್ಯವಾಗಿ ಮಳೆಗಾಲದ ಅಧಿವೇಶವನ್ನು ಕರೆಯಲಾಗುತ್ತದೆ. ಆಗ ಈ ವಿಷಯಗಳನ್ನು ಚರ್ಚಿಸ ಬಹುದಾದರೂ, ಬಜೆಟ್‌ ಅಧಿವೇಶನ ಸಂಪೂರ್ಣ ಯಾವುದೇ ಫ‌ಲ ನೀಡದೇ ವ್ಯರ್ಥವಾಗಿದ್ದಕ್ಕೆ ಪ್ರತಿಯಾಗಿ ವಿಶೇಷ ಅಧಿವೇಶನ ಕರೆಯಬಹುದಾಗಿದೆ. ಅಲ್ಲದೆ ಮುಂದಿನ ಬಾರಿಯೂ ಗದ್ದಲ ಉಂಟಾಗದಂತೆ ಸರಕಾರವು ಎಲ್ಲ ರಾಜಕೀಯ ಪಕ್ಷಗಳ ಜತೆ ಚರ್ಚೆ ನಡೆಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next