Advertisement

Rahul Gandhi ಜೂನ್ 4 ರ ನಂತರ ‘ಕಾಂಗ್ರೆಸ್ ಧುಂಡೋ ಯಾತ್ರೆ’ ನಡೆಸಬೇಕಾಗುತ್ತದೆ: ಶಾ

06:45 PM May 20, 2024 | Team Udayavani |

ಕರ್ನಾಲ್‌: ಜೂನ್ 4 ರ ನಂತರ ರಾಹುಲ್ ಗಾಂಧಿ ಅವರು “ಕಾಂಗ್ರೆಸ್ ಧುಂಡೋ ಯಾತ್ರೆ(ಕಾಂಗ್ರೆಸ್ ಹುಡುಕಿ ಯಾತ್ರೆ)ಕೈಗೊಳ್ಳಬೇಕಾಗುತ್ತದೆ, ಏಕೆಂದರೆ ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಹಳೆಯ ಪಕ್ಷ 40 ಸ್ಥಾನಗಳನ್ನು ಸಹ ಪಡೆಯುವುದಿಲ್ಲ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಲೇವಡಿ ಮಾಡಿದ್ದಾರೆ.

Advertisement

ಹರಿಯಾಣದ ಕರ್ನಾಲ್‌ನಲ್ಲಿ, ಹಿಸಾರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್‌ನ ವಿರುದ್ಧ ತಮ್ಮವಾಗ್ದಾಳಿಯನ್ನು ಮುಂದುವರೆಸಿದ ಶಾ ಅವರು ”ಸಾರ್ವತ್ರಿಕ ಚುನಾವಣೆಯ ನಾಲ್ಕು ಹಂತಗಳ ಮತದಾನದ ನಂತರ ಫಲಿತಾಂಶವನ್ನು ತಿಳಿಯಲು ಬಯಸುತ್ತೀರಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಈಗಾಗಲೇ 270 ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಬಹುಮತವನ್ನು ಪಡೆದುಕೊಂಡಿದೆ. ಉಳಿದ ಮೂರು ಹಂತದ ಮತದಾನದ ನಂತರ ಪಕ್ಷದ ಸ್ಥಾನಗಳ ಸಂಖ್ಯೆ 400 ದಾಟಲಿದೆ” ಎಂದರು.

“ಶೆಹಜಾದ, ದಮಡೋನ್-ವಾಲಿ ಕಾಂಗ್ರೆಸ್ 40 ಸ್ಥಾನಗಳನ್ನು ಸಹ ಪಡೆಯುವುದಿಲ್ಲ. ದುರ್ಬೀನು ಹಾಕಿದರೂ ಕಾಂಗ್ರೆಸ್ ಕಾಣುವುದಿಲ್ಲ” ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next