Advertisement

ಮುಂಬೈ ಸಮೀಪ ತಲೆಎತ್ತಲಿದೆ “ಅಕ್ರಮ ವಲಸಿಗರ ನಿರಾಶ್ರಿತರ ಕೇಂದ್ರ? ವರದಿ

12:02 PM Sep 10, 2019 | Nagendra Trasi |

ಮಹಾರಾಷ್ಟ್ರ: ಅಸ್ಸಾಂನಲ್ಲಿ ಕಳೆದ ವಾರ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ ಆರ್ ಸಿ) ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ಸುಮಾರು 19 ಲಕ್ಷ ಮಂದಿ ಅಸ್ಸಾಂ ನಿವಾಸಿಗಳಲ್ಲ ಎಂದು ತಿಳಿಸಿತ್ತು. ಇದೀಗ ಮುಂಬೈಯಲ್ಲಿ ಅಕ್ರಮ ವಲಸಿಗರನ್ನು ಬಂಧಿಸಿಡುವ ಶಿಬಿರ ನಿರ್ಮಾಣ ಮಾಡಲು ಜಾಗ ನೀಡುವಂತೆ ಮಹಾರಾಷ್ಟ್ರ ಗೃಹಸಚಿವಾಲಯ ನವಿ ಮುಂಬೈ ಯೋಜನಾ ಪ್ರಾಧಿಕಾರಕ್ಕೆ ಪತ್ರ ಬರೆದಿದೆ.

Advertisement

ಮೂಲಗಳ ಪ್ರಕಾರ, ಮುಂಬೈನ ನೇರ್ಲು ಪ್ರದೇಶದಲ್ಲಿ 2ರಿಂದ 3ಎಕರೆ ಜಾಗ ನೀಡುವಂತೆ ಕೋರಿ ಮಹಾರಾಷ್ಟ್ರ ನಗರ ಮತ್ತು ಇಂಡಸ್ಟ್ರೀಯಲ್ ಡೆವಲಪ್ ಮೆಂಟ್ ಕಾರ್ಪೋರೇಶನ್(ಸಿಐಡಿಸಿಒ) ಗೆ ಪತ್ರ ಬರೆದಿದೆ. ಮುಂಬೈನಿಂದ 20 ಕಿಲೋ ಮೀಟರ್ ದೂರದಲ್ಲಿರುವ ನವಿ ಮುಂಬೈ ಸಮೀಪದಲ್ಲಿದೆ ನೇರ್ಲು ಪ್ರದೇಶ.

ಆದರೆ ಮಹಾರಾಷ್ಟ್ರ ಗೃಹ ಸಚಿವಾಲಯ ಪತ್ರ ಬರೆದಿರುವ ವರದಿಯನ್ನು ತಳ್ಳಿಹಾಕಿದೆ. ಆದರೆ ಕೇಂದ್ರ ಸರಕಾರ ಅಕ್ರಮ ವಲಸಿಗರ ಶಿಬಿರ ನಿರ್ಮಾಣದ ಕುರಿತು ನಿಯಮಾವಳಿಯನ್ನು ಬಿಡುಗಡೆ ಮಾಡಿತ್ತು. ದೇಶದ ಪ್ರಮುಖ ನಗರದಲ್ಲಿ ವಲಸಿಗರ ಕೇಂದ್ರಗಳನ್ನು ನಿರ್ಮಿಸಬೇಕೆಂದು ಸೂಚಿಸಿತ್ತು ಎಂದು ವರದಿ ವಿವರಿಸಿದೆ.

ಅಸ್ಸಾಂನಲ್ಲಿನ ಮೂಲ ನಿವಾಸಿಗಳನ್ನು ಗುರುತಿಸುವ ಸಮಸ್ಯೆಯನ್ನು ಎನ್ ಆರ್ ಸಿ ಬಗೆಹರಿಸಿಕೊಳ್ಳಬೇಕಾದ ಅಗತ್ಯವಿದೆ. ನಾವ್ಯಾಕೆ ಎನ್ ಆರ್ ಸಿ ಪ್ರಕ್ರಿಯೆಯನ್ನು ಬೆಂಬಲಿಸಬೇಕು. ಮುಂಬೈಯಲ್ಲಿಯೂ ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾದೇಶಿಗಳನ್ನು ಬಂಧಿಸಿಡುವ ಕೆಲಸ ಮಾಡಬೇಕು ಎಂದು ಶಿವಸೇನಾದ ಮುಖಂಡ ಅರವಿಂದ್ ಸಾವಂತ್ ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next