Advertisement

2 ವರ್ಷದ ಹೋರಾಟದ ಬಳಿಕ ಸಿಕ್ಕಿದ್ದು 33 ರೂ. ಪರಿಹಾರ!

12:14 AM May 10, 2019 | Team Udayavani |

ಜೈಪುರ: ರೈಲು ಟಿಕೆಟ್‌ ರದ್ದು ಮಾಡಿದ್ದಕ್ಕೆ ಕಡಿತಗೊಳಿಸಿದ್ದ 33 ರೂ. ಹಿಂಪಡೆಯಲು ರಾಜಸ್ಥಾನ ಕೋಟಾದ ಇಂಜಿನಿಯರ್‌ ಒಬ್ಬರು ಎರಡು ವರ್ಷಗಳವರೆಗೆ ರೈಲ್ವೇ ಇಲಾಖೆಯ ವಿರುದ್ಧ ಹೋರಾಟ ನಡೆಸಿದ್ದಾರೆ! ಜಿಎಸ್‌ಟಿ ಜಾರಿಗೆ ಬರುವುದಕ್ಕೂ ಮೊದಲು ಅಂದರೆ 2017 ಜುಲೈ 1 ಕ್ಕೂ ಮೊದಲು ಕೋಟಾದಿಂದ ದಿಲ್ಲಿಗೆ ರೈಲು ಟಿಕೆಟ್‌ ಬುಕ್‌ ಮಾಡಿದ್ದ ಸುಜೀತ್‌ ಸ್ವಾಮಿ, ಜಿಎಸ್‌ಟಿ ಜಾರಿಗೆ ಬಂದ ನಂತರ ರದ್ದು ಮಾಡಿದ್ದರು. ಆದರೆ ಟಿಕೆಟ್‌ ದರ 765 ರೂ. ಪೈಕಿ ರದ್ದತಿ ಶುಲ್ಕ 65 ರೂ. ಕಡಿತಗೊಳಿಸು ವುದರ ಬದಲಿಗೆ ಇಲಾಖೆ 100 ರೂ. ಕಡಿತಗೊಳಿಸಿತ್ತು. ಇದರ ವಿರುದ್ಧ ನಡೆಸಿದ ಹೋರಾಟ ಅವರಿಗೆ ಫ‌ಲ ನೀಡಿದೆ. ಇಲಾಖೆ 35 ರೂ. ಕೊಡಬೇಕಿತ್ತಾದರೂ 33 ರೂ. ಮಾತ್ರ ವಾಪಸ್‌ ಮಾಡಿದೆ. ಹೀಗಾಗಿ ಈ 2 ರೂ.ಗೆ ಹೋರಾಟ ಮುಂದು ವರಿಸುವು ದಾಗಿ ಹೇಳಿದ್ದಾರೆ. ಇದೇ ರೀತಿ 9 ಲಕ್ಷ ಮಂದಿಗೆ ಇಲಾಖೆ ಹೆಚ್ಚುವರಿ ಕಡಿತ ಗೊಳಿಸಿದೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next