Advertisement
ರಸ್ತೆಗಳಿಗೆ ಭಾರೀ ಹಾನಿ: ಒಂದು ಅಂದಾಜಿನ ಪ್ರಕಾರ, 20,000 ಮನೆಗಳು ಹಾಗೂ 10 ಸಾವಿರ ಕಿ.ಮೀ.ಗಳಷ್ಟು ರಸ್ತೆ ಗಳಿಗೆ ಹಾನಿಯಾಗಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಿಗೆ ಹೆಚ್ಚಿನ ಹಾನಿಯುಂಟಾಗಿದ್ದು, ಸರಕಾರದಿಂದ ರಸ್ತೆ ರಿಪೇರಿಗೆ ವಿಶೇಷ ಪ್ಯಾಕೇಜ್ ಬಂದ ಕೂಡಲೇ ದುರಸ್ತಿ ಕಾರ್ಯ ಆರಂಭಿ ಸುತ್ತೇವೆ ಎಂದು ಇಡುಕ್ಕಿ ಜಿಲ್ಲಾಧಿಕಾರಿ ಜೀವನ್ ಬಾಬು ತಿಳಿಸಿದ್ದಾರೆ. ಮಳೆಯಿಂದಾಗಿ 5 ದಿನದಲ್ಲಿ 39 ಜನರು ಸಾವನ್ನ ಪ್ಪಿದ್ದು, ಪ್ರಸಕ್ತ ಮುಂಗಾರಿನಲ್ಲಿ ಮೃತರ ಸಂಖ್ಯೆ 187ಕ್ಕೇರಿದೆ.
Related Articles
ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲೂ ಮಳೆಯ ರುದ್ರನರ್ತನ ಆವರಿಸಿದೆ. ಹಿಮಾಚಲ ದಲ್ಲಿ ಅಗಾಧ ಮಳೆಯ ಪರಿಣಾಮ, 18 ಮಂದಿ ಸಾವಿಗೀಡಾಗಿದ್ದಾರೆ. ಇದಲ್ಲದೆ, ಶಿಮ್ಲಾದ ಬುಡಕಟ್ಟು ಜನಾಂಗಗಳು ಹೆಚ್ಚಾಗಿ ವಾಸಿಸುವ ಕಿನೌ°ರ್ ಪ್ರಾಂತ್ಯದಲ್ಲಿ ಬಿಯಾಸ್ ನದಿಗೆ ಕಟ್ಟಲಾಗಿದ್ದ ರಿಸ್ಪಾ ಹೆಸರಿನ ಸೇತುವೆ ಕೊಚ್ಚಿ ಹೋಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಪ್ರಮುಖ ನದಿಗಳಾದ ಗಂಗಾ, ಯಮುನಾ, ಸಾಯಿ, ರಪ್ತಿ ಹಾಗೂ ಬನ್ಸಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಜಮ್ಮುವಿನಲ್ಲಿ ಮಳೆಯಿಂದಾಗಿ ಹಲವು ರಸ್ತೆಗಳಿಗೆ ಹಾನಿಯಾಗಿದ್ದು, ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಪ್ರಸಕ್ತ ವರ್ಷ ಮಳೆ ಸಂಬಂಧಿ ಘಟನೆಗಳಿಗೆ 7 ರಾಜ್ಯಗಳಲ್ಲಿ 776 ಮಂದಿ ಅಸುನೀಗಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.
Advertisement
ಸದ್ಯಕ್ಕೆ ಶಬರಿಮಲೆ ಭೇಟಿ ಬೇಡಜಗತ್ಪ್ರಸಿದ್ಧ ಶಬರಿ ಮಲೆ ಅಯ್ಯಪ್ಪ ದೇಗುಲದ ಬಳಿ ಹರಿಯುವ ಪಂಬಾ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದ್ದು, ಭಕ್ತಾದಿಗಳು ಸದ್ಯದ ಮಟ್ಟಿಗೆ ಶಬರಿಮಲೆಗೆ ಭೇಟಿ ನೀಡಬಾರದೆಂದು ಪಟ್ಟಣಂ ತಿಟ್ಟ ಜಿಲ್ಲಾಡಳಿತ ಸೂಚಿಸಿದೆ. ಕೊಚುಪಂಬಾ, ಅನಾತ್ತೂಡ್-ಕಕ್ಕಿ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಹರಿಬಿಟ್ಟಿರುವುದು ಪ್ರವಾಹ ಭೀತಿಗೆ ಕಾರಣ.