Advertisement

ಗುಂಡಿನ ದಾಳಿಯಂಥ ಕೃತ್ಯ ಸಹಿಸಲ್ಲ: ಪಾಕ್‌ಗೆ ಭಾರತ

08:50 AM Jan 26, 2018 | Karthik A |

ಜಮ್ಮು: ನಿರಂತರ ಗುಂಡಿನ ದಾಳಿಗಳಿಂದ ಗಡಿಯಲ್ಲಿ ಪರಿಸ್ಥಿತಿ ಬಿಗುವಾದ ಬೆನ್ನಲ್ಲೇ ಗುರುವಾರ ಬಿಎಸ್‌ಎಫ್ ಮತ್ತು ಪಾಕ್‌ ರೇಂಜರ್‌ಗಳ ಸಭೆ ನಡೆದಿದೆ. ಈ ವೇಳೆ ಪಾಕಿಸ್ಥಾನದ ಅಪ್ರಚೋದಿತ ಗುಂಡಿನ ದಾಳಿ ಕುರಿತು ಬಿಎಸ್‌ಎಫ್ ಅಧಿಕಾರಿಗಳು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದು, ಇಂಥ ಕೃತ್ಯಗಳನ್ನು ಸಹಿಸಲಸಾಧ್ಯ ಎಂದಿದ್ದಾರೆ. ಪಾಕಿಸ್ಥಾನದ ಕೋರಿಕೆಯ ಮೇರೆಗೆ ಅಂತಾರಾಷ್ಟ್ರೀಯ ಗಡಿಯ ಸುಚೇತ್‌ಗಢದಲ್ಲಿ ಸಭೆ ಆಯೋಜಿಸಲಾಗಿತ್ತು. ಕೆಲ ದಿನಗಳ ಹಿಂದೆ ಭಾರತವು ಇದೇ ರೀತಿಯ ಕೋರಿಕೆ ಸಲ್ಲಿಸಿತ್ತಾದರೂ ಅದಕ್ಕೆ ಪಾಕ್‌ ಕಡೆಯಿಂದ ಪ್ರತಿಕ್ರಿಯೆ ಬಂದಿರಲಿಲ್ಲ. 30 ನಿಮಿಷಗಳ ಮಾತುಕತೆಯಲ್ಲಿ ಐವರು ಸದಸ್ಯರ ಬಿಎಸ್‌ಎಫ್ ತಂಡ ಮತ್ತು ಪಾಕ್‌ನ 10 ಮಂದಿ ರೇಂಜರ್‌ಗಳ ತಂಡ ಪಾಲ್ಗೊಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next