Advertisement

ಅದ್ವಿತಿ ಕನಸಿನ ಕಾರ್ಮೋಡ

09:14 AM May 16, 2019 | Lakshmi GovindaRaj |

ನಟಿ ಅದ್ವಿತಿ ಶೆಟ್ಟಿ ಮೊಗದಲ್ಲಿ ಮಂದಹಾಸ ಮೂಡಿದೆ. ಅದಕ್ಕೆ ಕಾರಣ “ಕಾರ್ಮೋಡ’. ಕಾರ್ಮೋಡಕ್ಕೂ ಅದ್ವಿತಿ ಮಂದಹಾಸಕ್ಕೂ ಏನು ಸಂಬಂಧ ಎಂದು ನೀವು ಕೇಳಬಹುದು.”ಕಾರ್ಮೋಡ ಸರಿದು’ ಎಂಬ ಚಿತ್ರವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಆ ಚಿತ್ರ ಈ ವಾರ (ಮೇ 17) ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ನಾಯಕಿಯಾಗಿರೋದು ಅದ್ವಿತಿ ಶೆಟ್ಟಿ. ಅದೇ ಕಾರಣದಿಂದ ಅದ್ವಿತಿ ಖುಷಿಯಾಗಿದ್ದಾರೆ.

Advertisement

ಚಿತ್ರದಲ್ಲಿ ಅದ್ವಿತಿ ಡಾಕ್ಟರ್‌ ಆಗಿ ನಟಿಸಿದ್ದಾರೆ. ಮಲೆನಾಡಿನಲ್ಲಿ ಬಂದು ಸೇವೆ ಮಾಡುತ್ತಿರುವ ಡಾಕ್ಟರ್‌ ಪಾತ್ರವಂತೆ. “ಕಥೆ, ನನ್ನ ಪಾತ್ರ ತುಂಬಾ ಚೆನ್ನಾಗಿದೆ. ನಾನಿಲ್ಲಿ ಡಾಕ್ಟರ್‌ ಪ್ರಿಯಾ ಎಂಬ ಪಾತ್ರ ಮಾಡಿದ್ದೇನೆ. ಸಾಕಷ್ಟು ಅರ್ಥಪೂರ್ಣ ಪಾತ್ರವಿದು. ಇಡೀ ಸಿನಿಮಾವನ್ನು ಕುದುರೆಮುಖದಲ್ಲಿ ಚಿತ್ರೀಕರಿಸಿದ್ದು, ಕುದುರೆಮುಖದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಯಸುವವರು ನಮ್ಮ ಸಿನಿಮಾ ನೋಡಬಹುದು. ಚಿತ್ರದಲ್ಲಿ ಪ್ರಕೃತಿ ಸೌಂದರ್ಯದ ಜೊತೆಗೆ ಉತ್ತಮ ಸಂದೇಶವೂ ಇದೆ’ ಎನ್ನುವುದು ಅದ್ವಿತಿ ಮಾತು.

ಚಿತ್ರದಲ್ಲಿ ಸೂಕ್ಷ್ಮ ಸಂದೇಶವೂ ಇದೆಯಂತೆ.ಬದುಕಿನಲ್ಲಿ ಖನ್ನತೆಗೆ ಒಳಗಾದಾಗ ಆತ್ಮಹತ್ಯೆ ಒಂದೇ ಪರಿಹಾರ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಆ ತರಹ ಯೋಚಿಸದೇ ದಿಟ್ಟವಾಗಿ ಸಮಸ್ಯೆಗಳನ್ನು ಎದುರಿಸಿದಾಗ ಸುಂದರ ಬದುಕು ತೆರೆದುಕೊಳ್ಳುತ್ತದೆ. ಇದೇ ಎಳೆಯನ್ನ ಇಟ್ಟುಕೊಂಡು “ಕಾರ್ಮೋಡ ಸರಿದಾಗ’ ಚಿತ್ರ ಮಾಡಲಾಗಿದೆಯಂತೆ.

ಚಿತ್ರದ ಕಥೆಯಲ್ಲಿ ಇಂದಿನ ಜನರು ತಮ್ಮ ಯಾಂತ್ರಿಕ ಬದುಕಿನಲ್ಲಿ ಹೇಗೆ ಪ್ರಸ್ತುತ ಜನರು ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಇದರಿಂದ ಸಂಬಂಧಗಳು ಹೇಗೆ ದೂರವಾಗುತ್ತಿದೆ. ಕಾಲ ಬದಲಾದಂತೆ ಹೇಗೆ ಎಲ್ಲವು ಬದಲಾಗುತ್ತಿದೆ, ಮನುಷ್ಯನ ಬಾಂಧವ್ಯಗಳು ಎಷ್ಟು ಮುಖ್ಯ ಎಂಬುದನ್ನು ಹೇಳಲಾಗಿದೆ.

ಪ್ರತಿ ಹತ್ತು ನಿಮಿಷಕ್ಕೊಮ್ಮೆ ಹೊಸ ಸನ್ನಿವೇಶಗಳು ಬರುವುದರಿಂದ ಮುಂದೇನು ಎಂದು ಊಹಿಸಲು ಆಗುವುದಿಲ್ಲ. ಕೊನೆಯ ಹತ್ತು ನಿಮಿಷದ ಕ್ಲೈಮಾಕ್ಸ್‌ ನೋಡುಗನಿಗೆ ಚಿತ್ರಮಂದಿರದಿಂದ ಹೊರಬಂದರೂ ಕಾಡುತ್ತಲೇ ಇರುತ್ತದೆ ಎಂದು ಭರವಸೆಯಿಂದ ಹೇಳುತ್ತಾರೆ ಅದ್ವಿತಿ. ಈಗಾಗಲೇ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾವನ್ನು ಜನ ಸ್ವೀಕರಿಸುತ್ತಾರೆಂಬ ವಿಶ್ವಾಸ ಅದ್ವಿತಿಯವರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next