Advertisement

ವಕೀಲಿಕೆ ಮುಂದುವರಿಕೆ: ಮೊಯ್ಲಿ ಇಂಗಿತ

07:10 AM Jun 25, 2019 | Team Udayavani |

ಬೆಂಗಳೂರು: ವೃತ್ತಿಯಲ್ಲಿ ಮೂಲತಃ ವಕೀಲರಾಗಿರುವ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರು ಸೋಮವಾರ ಹೈಕೋರ್ಟ್‌ಗೆ ಬಂದಿದ್ದರು.

Advertisement

ಕೋರ್ಟ್‌ ಕಲಾಪಗಳು ಆರಂಭವಾಗುತ್ತಿದ್ದಂತೆ ಬೆಳಿಗ್ಗೆ 11 ಗಂಟೆ ವೇಳೆಗೆ ಕರಿ ಕೋಟು ಧರಿಸಿ ಹೈಕೋರ್ಟ್‌ಗೆ ಆಗಮಿಸಿದ ಮೊಯ್ಲಿಯವರು ಕಾರಿಡಾರ್‌ನಲ್ಲಿ ಪರಿಚಯಸ್ಥ ವಕೀಲರನ್ನು ಭೇಟಿಯಾಗಿ ಲೋಕಾಭಿರಾಮವಾಗಿ ಮಾತನಾಡಿಸಿದರು.

ಇದೇ ವೇಳೆ ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ. ಆಚಾರ್ಯ, ಹಿರಿಯ ವಕೀಲರಾದ ಡಿಎಲ್‌ಎನ್‌ ರಾವ್‌, ರವೀಂದ್ರನಾಥ್‌ ಕಾಮತ್‌, ಕಲ್ಯಾಣ ಬಸವರಾಜ್‌ ಸೇರಿದಂತೆ ಹಿರಿಯ-ಕಿರಿಯ ವಕೀಲರನ್ನು ಭೇಟಿಯಾಗಿ ಕೆಲ ಹೊತ್ತು ಮಾತನಾಡಿದ ಬಳಿಕ ಎಲ್ಲರೊಟ್ಟಿಗೆ ಚಹಾ ಕುಡಿದು ಅಲ್ಲಿಂದ ನಿರ್ಗಮಿಸಿದರು.

ಈ ಸಂದರ್ಭದಲ್ಲಿ ಅನೌಪಚಾರಿಕವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮೂಲತಃ ವಕೀಲ. ಆದರೆ, ರಾಜಕೀಯದಲ್ಲಿ ಸಕ್ರೀಯವಾದ ಬಳಿಕ ವಕೀಲಿಕೆ ನಡೆಸಲು ಸಾಧ್ಯವಾಗಿರಲಿಲ್ಲ. ಆಗಾಗ ಕೋರ್ಟ್‌ಗೆ ಬಂದು ಹೋಗುತ್ತಿದೆ. ಈಗ ರಾಜಕೀಯದಲ್ಲಿ ಒಂದಿಷ್ಟು ಬಿಡುವು ಸಿಕ್ಕಿದ್ದು ವಕೀಲ ವೃತ್ತಿ ಮುಂದುವರಿಸುತ್ತೇನೆ. ಆಗಾಗ ಹೈಕೋರ್ಟ್‌ಗೆ ಬರುತ್ತಿರುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next