Advertisement

ಸರ್ಕಾರಿ ಸೌಲಭ್ಯ ಸದ್ಬಳಕೆಗೆ ಸಲಹೆ

05:07 PM Aug 05, 2019 | Team Udayavani |

ಕೋಲಾರ: ತಾಲೂಕಿನ ಕುರಗಲ್ ಗ್ರಾಪಂನಲ್ಲಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ ಚೌಡಪ್ಪ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

Advertisement

ಕೃಷಿ, ಪಶುಪಾಲನೆ, ರೇಷ್ಮೆ, ಅರಣ್ಯ, ತೋಟಗಾರಿಕಾ,ಪಶುಪಾಲನಾ ಮತ್ತಿತರ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ಆಯಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ ಕೇಂದ್ರ-ರಾಜ್ಯ ಸರ್ಕಾರಿ ಯೋಜನೆಗಳ ಸದುಪಯೋಗ ಮಾಡಿಕೊಳ್ಳಲು ತಿಳಿಸಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಮುನಿ ರಾಜು, ವಿವಿಧ ಇಲಾಖೆಗಳಿಂದ ರೈತರಿಗೆ ಸಿಗುವ ಸೌಲಭ್ಯ, ಅವುಗಳನ್ನು ಪಡೆದು ಕೊಳ್ಳುವ ಬಗೆ, ನರೇಗಾ ಯೋಜನೆಯಿಂದ ಸಿಗುವ ಸೌಲಭ್ಯ, ಪಾಲಿಹೌಸ್‌ ಸಬ್ಸಿಡಿ ಮತ್ತಿತರ ಯೋಜನೆ ಕುರಿತು ಅಧಿಕಾರಿ ಗಳು ಮಾಹಿತಿ ಒದಗಿಸಲು ಸೂಚಿಸಿದರು.

50 ಸಾವಿರ ರೂ.ರಾಸು ವಿಮೆಗೆ ಸಲಹೆ: ಪಶುಪಾಲನಾ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ, ರಾಸು ರೋಗಕ್ಕೆ ತುತ್ತಾಗಿ ಸತ್ತರೆ 50 ಸಾವಿರ ರೂ, ಸಹಜ ಸಾವಿಗೆ 10 ಸಾವಿರ ರೂ.ಗಳ ವಿಮೆ ಹಣ ಸಿಗುತ್ತದೆ. ಕುರಿ,ಮೇಕೆಗೂ ವಿಮೆ ಮಾಡಿ ಸಿದ್ದಲ್ಲಿ ಸಹಜ ಸಾವಿಗೆ 5 ಸಾವಿರ ರೂ ಪಡೆದುಕೊಳ್ಳಬಹುದಾಗಿದೆ ಎಂದರು.

ಗ್ರಂಥಾಲಯಕ್ಕಾಗಿ ಹೊಸ ಕಟ್ಟಡ: ಗ್ರಾಪಂ ವ್ಯಾಪ್ತಿಯಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಗ್ರಂಥಾಲಯ ಇಲಾಖೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಪರ ಅಂಗನವಾಡಿ ಸೂಪರ್‌ವೈಸರ್‌ ರತ್ನಮ್ಮ, ಮಕ್ಕಳಿಗೆ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕುರಿತು ಮಾಹಿತಿ ಒದಗಿಸಿದರು.

ಶಾಲೆಬಿಟ್ಟ ಮಕ್ಕಳ ಮಾಹಿತಿಗೆ ಸಲಹೆ: ಶಾಲೆ ಬಿಟ್ಟ ಮಕ್ಕಳಿದ್ದರೆ ಹುಡುಕಿ ಮತ್ತೆ ಶಾಲೆಗೆ ಸೇರಿಸಲು ಕ್ರಮವಹಿಸಿ ಎಂದು ಪಿಡಿಒ ಮುನಿರಾಜು ಸಲಹೆ ನೀಡಿದರು. ಗ್ರಾಪಂ ಉಪಾಧ್ಯಕ್ಷ ಎಂ.ಎನ್‌.ಕೃಷ್ಣಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ್‌, ಮುರಳಿ ಮೋಹನ್‌, ತೋಟಗಾರಿಕಾ ಇಲಾಖೆಯ ಶಶಿಧರ್‌, ಶಿಕ್ಷಣ ಇಲಾಖೆ ಸುಧಾರಾಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next