Advertisement

ಮಳೆ ಕೊಯ್ಲಿಗೆ ಸಲಹೆ

12:12 AM Jun 30, 2019 | Sriram |

ಚೆನ್ನೈ: ತಮಿಳುನಾಡಿನಲ್ಲಿ ತೀವ್ರತರವಾದ ನೀರಿನ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸೂಪರ್‌ಸ್ಟಾರ್‌ ರಜನಿಕಾಂತ್‌, “ಕೂಡಲೇ ನಾವು ಸಮರೋಪಾದಿಯಲ್ಲಿ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

Advertisement

ತತ್‌ಕ್ಷಣವೇ ನಾವೆಲ್ಲರೂ ಮಳೆ ನೀರನ್ನು ಸಂರಕ್ಷಿಸುವ ಕೆಲಸ ಮಾಡಬೇಕಾ ಗುತ್ತದೆ. ಅದೂ ಸಮರೋಪಾದಿ ಯಲ್ಲಿ ನಡೆಯಬೇಕು. ಮಳೆಗಾಲ ಶುರುವಾಗುವ ಮೊದಲು ಎಲ್ಲ ಕೆರೆಗಳು, ಸರೋವರಗಳ ಕೆಸರೆತ್ತುವ ಕೆಲಸ ಮಾಡಿದರಷ್ಟೇ ನೀರಿನ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದೂ ರಜನಿ ಹೇಳಿದ್ದಾರೆ.


Advertisement

Udayavani is now on Telegram. Click here to join our channel and stay updated with the latest news.

Next