Advertisement

Adve: ಮರಳು ಅಕ್ರಮ ಸಾಗಾಟ; ಟಿಪ್ಪರ್‌ ವಶ

10:50 PM Nov 03, 2023 | Team Udayavani |

ಪಡುಬಿದ್ರಿ: ಅಡ್ವೆಯಿಂದ ಕಾಂಜರಕಟ್ಟೆ ಕಡೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‌ ಅನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Advertisement

ರಾತ್ರಿ ಕರ್ತವ್ಯ ನಿರತರಾಗಿದ್ದ ಪಡುಬಿದ್ರಿ ಎಸ್ಸೆ$ç ಪ್ರಸನ್ನ ಎಂ.ಎಸ್‌. ಅವರು ನ. 3ರಂದು ಬೆಳಗ್ಗಿನ ಜಾವ 3.20ರ ವೇಳೆಗೆ ಅಡ್ವೆ ಮಹಾಗಣಪತಿ ದೇವಸ್ಥಾನದ ಬಳಿ ಟಿಪ್ಪರ್‌ ಲಾರಿಯನ್ನು ನಿಲ್ಲಿಸುವಂತೆ ಸೂಚಿಸಿದ್ದು, ಈ ವೇಳೆ ಚಾಲಕ ಲಾರಿಯನ್ನು 100 ಮೀಟರ್‌ ದೂರ ಕೊಂಡೊಯ್ದು ನಿಲ್ಲಿಸಿ, ಪಲಿಮಾರು ರಸ್ತೆ ಕಡೆಗೆ ಓಡಿ ಹೋಗಿದ್ದ.

ಟಿಪ್ಪರ್‌ ಅನ್ನು ಪರಿಶೀಲಿಸಿದಾಗ ಲಾರಿಯಲ್ಲಿ ಅಕ್ರಮವಾಗಿ ಸುಮಾರು 10,000 ರೂಪಾಯಿ ಬೆಲೆಬಾಳುವ ಸುಮಾರು 2 ಯೂನಿಟ್‌ನಷ್ಟು ಮರಳು ತುಂಬಿಸಿರುವುದು ಕಂಡುಬಂದಿತ್ತು. ಲಾರಿಯಲ್ಲಿ ಮರಳುಗಾರಿಕೆ ಬಗ್ಗೆ ಪರ್ಮಿಟ್‌ ಆಗಲಿ, ಪರವಾನಿಗೆ ಆಗಲಿ ವಾಹನಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳು ಕಂಡು ಬಂದಿರುವುದಿಲ್ಲ.

ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next