Advertisement

ಮುಂದುವರಿದ ತೆರವು ಕಾರ್ಯಾಚರಣೆ 

11:30 AM Aug 02, 2018 | Team Udayavani |

ಮಹಾನಗರ : ಪಾಲಿಕೆಯ ನಗರ ಯೋಜನೆ ವಿಭಾಗ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಬೀದಿ ವ್ಯಾಪಾರಸ್ಥರ ಹಾಗೂ ಗೂಡಂಗಡಿ ತೆರವು ಕಾರ್ಯಾಚರಣೆ ಬುಧವಾರವೂ ನಗರದ ವಿವಿಧ ಭಾಗಗಳಲ್ಲಿ ಮುಂದುವರಿಯಿತು. ಕಾಪಿಕಾಡ್‌ ಬಳಿ ರಸ್ತೆ ವಿಸ್ತರಣೆಗೆ ಸ್ಥಳ ಬಿಟ್ಟುಕೊಡದ ಗೂಡಂಗಡಿಗಳನ್ನು ತೆರವು ಮಾಡಲಾಯಿತು. ಭಾರತ್‌ಮಾಲ್‌ ಮುಂಭಾಗ ಸ್ತ್ರೀ ಶಕ್ತಿ ಭವನ ಪಕ್ಕದಲ್ಲಿದ್ದ ಹಾಲಿನ ಬೂತ್‌, ಎಸ್‌ ಟಿಡಿ ಬೂತ್‌ಗಳನ್ನು ಕೆಡವಲಾಯಿತು. ಇನ್ನೂ ಕದ್ರಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಹಾಕಲಾಗಿದ್ದ ಗೇಟ್‌ ತೆರವು ಮಾಡಲಾಯಿತು.

Advertisement

ಕಂದಾಯ ಇಲಾಖೆ ಅಧಿಕಾರಿಗಳು ಸೆಂಟ್ರಲ್‌ ಮಾರ್ಕೆಟ್‌, ಲೇಡಿಗೋಷನ್‌ ಬಳಿ ಕಾರ್ಯಾಚರಣೆ ನಡೆಸಿದರು. ನಗರ ಯೋಜನಾಧಿಕಾರಿಗಳಾದ ಬಾಲಕೃಷ್ಣ ಗೌಡ, ಸಹಾಯಕ ನಗರ ಯೋಜನಾಧಿಕಾರಿ ಮಂಜುನಾಥ ಸ್ವಾಮಿ, ಜಂಟಿ ನಿರ್ದೇಶಕ ಜಯರಾಜ್‌, ದಿಲೀಪ್‌ ಎಸ್‌. ಗಧ್ಯಾಲ್‌, ಅಶೋಕ್‌ ಕುಮಾರ್‌, ಕಂದಾಯ ವಿಭಾಗದ ಪ್ರವೀಣ್‌ ಕರ್ಕೇರಾ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next