Advertisement

ಮೋದಿ ಇದ್ದ ಕುಟೀರಕ್ಕೆ ‘ಮುಂಗಡ ಬುಕಿಂಗ್‌’ಸುಗ್ಗಿ

09:47 AM Sep 03, 2019 | Team Udayavani |

ನವದೆಹಲಿ: ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಂಗಿದ್ದ ಹಿಮಾಚಲ ಪ್ರದೇಶದ ರುದ್ರ ಧ್ಯಾನ ಗುಹೆಗೀಗ ಭಾರೀ ಬೇಡಿಕೆ ಬಂದಿದ್ದು, ಇದೇ ಮೊದಲ ಬಾರಿಗೆ ಗುಹೆಯ ವಾಸ್ತವ್ಯಕ್ಕೆ ಮುಂಗಡ ಬುಕಿಂಗ್‌ ಬರತೊಡಗಿವೆ. ಈವರೆಗೆ ಒಟ್ಟು 70ಕ್ಕೂ ಹೆಚ್ಚು ಬುಕಿಂಗ್‌ಗಳು ಬಂದಿವೆ.

Advertisement

ಮೋದಿಯವರು ತಂಗಿದ್ದ ಗುಹೆ ಯನ್ನು 2018ರಲ್ಲಿ ನಿರ್ಮಿಸ ಲಾಗಿತ್ತು. ಆಗಿನಿಂದ ಮೋದಿ ಬರುವ ವರೆಗೂ ಕೇವಲ ಒಬ್ಬೇ ಒಬ್ಬ ಅಧ್ಯಾತ್ಮಿಕ ಆಸಕ್ತರು ಒಮ್ಮೆ ಈ ಗುಹೆಗೆ ಭೇಟಿ ನೀಡಿದ್ದರು. ಆದರೆ, ಮೋದಿ ಬಂದು ಹೋದ ನಂತರ ಜೂನ್‌ನಲ್ಲಿ 28 ಮುಂಗಡ ಬುಕಿಂಗ್‌ ಬಂದಿದ್ದು, ಜುಲೈನಲ್ಲಿ 10, ಆಗಸ್ಟ್‌ನಲ್ಲಿ 8, ಸೆಪ್ಟೆಂಬರ್‌ನಲ್ಲಿ 19 ಹಾಗೂ ಅಕ್ಟೋಬರ್‌ನಲ್ಲಿ 10 ಮಂದಿ ಬುಕ್‌ ಮಾಡಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್‌ ಪಟೇಲ್ ಹೇಳಿದ್ದಾರೆ. ಗುಹೆಯಲ್ಲಿ ಒಂದು ರಾತ್ರಿಯ ತಂಗುವಿಕೆಗೆ 1,500 ರೂ. ನೀಡಬೇಕಿದ್ದು, ಬೆಳಗ್ಗೆ 6ರಿಂದ ಸಂಜೆ 6ರವರೆಗೆ 999 ರೂ. ನೀಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next