Advertisement

ವಯಸ್ಕರು ಅಕ್ಷರಸ್ಥರಾಗಲಿ: ಹೊಸ್ಮನಿ

02:52 PM Aug 11, 2017 | Team Udayavani |

ಯಾದಗಿರಿ: ವಯಸ್ಕರು ಸಾಕ್ಷರತೆ ಹೊಂದಿದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಾಯಕ ಅಧಿಕಾರಿ ಶ್ರೀಶೈಲ ಹೊಸ್ಮನಿ ಹೇಳಿದರು.ಶಹಾಪುರ ತಾಲೂಕು ನಾಯ್ಕಲ್‌ ಗ್ರಾಮದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಹಾಗೂ ಗ್ರಾಮ ಲೋಕ ಶಿಕ್ಷಣ ಸಮಿತಿ ಸಹಯೋಗದಲ್ಲಿ ಸಾಕ್ಷರ ಭಾರತ 2017ರ ಕಾರ್ಯಕ್ರಮದ ಅಡಿ ಸ್ವಯಂ ಸೇವಕರ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ವಯಸ್ಕರು ಅಕ್ಷರ ಕಲಿತು ಅಕ್ಷರಸ್ಥರಾಗಬೇಕು. ತಂದೆ ತಾಯಿ ಋಣ ತೀರಿಸಬೇಕು ಎಂದರೆ ಪ್ರತಿಯೊಬ್ಬರು ಸಾಕ್ಷರತೆ ಹೊಂದಬೇಕು. ಅಕ್ಷರದ ಜ್ಞಾನದ ಜತೆಗೆ ಜೀವನ ಪಾಠ ಕಲಿಯಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಖಾಜಾ ಮೈನೋದ್ದೀನ್‌ ಜೇಮಶೇರಿ, ವಯಸ್ಕರಿಗೆ ಅಕ್ಷರ ಕಲಿಸಿ, ಸಾಕ್ಷರತೆಯನ್ನಾಗಿ ಮಾಡುವ
ಗುರಿ ಸ್ವಯಂ ಸೇವಕರ ಮೇಲಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೇರಕ ವೆಂಕಟೇಶ ಕಟ್ಟಿಮನಿ, ಗ್ರಾಮದಲ್ಲಿ ಕಲಿಕಾ ಕೇಂದ್ರ ತೆರೆಯಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. 75 ಜನ ಸ್ವಯಂ ಸೇವಕರಿಗೆ 4 ದಿನಗಳ ಕಾಲ ತರಬೇತಿ ನೀಡುವ ಮೂಲಕ ಕಲಿಸುವ ಸಾಮರ್ಥ್ಯ ತರಬೇತಿ ನೀಡಲಾಗುತ್ತದೆ. 750 ಜನ ವಯಸ್ಕರನ್ನು ಅಕ್ಷರಸ್ಥರಾಗಿ ಮಾಡುವ ಮಹತ್ತರ ಗುರಿ ಹೊಂದಲಾಗಿದೆ. ಚುನಾಯಿತ ಜನಪ್ರತಿನಿಧಿಗಳು ಮತ್ತು ಅ ಧಿಕಾರಿಗಳು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕಿ ಚನ್ನಮಲ್ಲಮ್ಮ, ದೈಹಿಕ ಶಿಕ್ಷಣ ಶಿಕ್ಷಕ ವೆಂಕಣ್ಣಗೌಡ, ಸರ್ಕಾರಿ ಪ್ರೌಢಶಾಲೆ ಪ್ರಭಾರಿ ಮುಖ್ಯಶಿಕ್ಷಕ ರಂಗೋಜಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ಸ್ವಯಂ ಸೇವಕಿ ಈರಮ್ಮ ಪ್ರಾರ್ಥಿಸಿದರು. ಶಿಕ್ಷಕ ಬಾಬುನಾಯ್ಕ ನಿರೂಪಿಸಿ, ಸ್ವಾಗತಿಸಿದರು. ಪ್ರೇರಕಿ ಅನ್ನಪೂರ್ಣ ಆನೆಗುಂದಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next