Advertisement

Adkaru: ಬ್ಯಾನರ್‌ಗೆ ಹಾನಿ

12:40 AM Jan 12, 2024 | Team Udayavani |

ಸುಳ್ಯ: ಸುಳ್ಯ ಸಮೀಪದ ಅಡ್ಕಾರಿನಲ್ಲಿ ಹಾಕಿದ ಬ್ಯಾನರ್‌ಗೆ ಕಿಡಿಗೇಡಿಗಳು ಹಾನಿ ಮಾಡಿದ ಘಟನೆ ಜ. 10ರಂದು ರಾತ್ರಿ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ.

Advertisement

ಕಾರ್ತೀಕೇಯ ಯುವ ಸೇವಾ ಸಮಿತಿಯವರು ಅಡ್ಕಾರು ದೇವಸ್ಥಾನಕ್ಕೆ ತಿರುಗುವಲ್ಲಿ ಅಯೋಧ್ಯೆ ಕಾರ್ಯಕ್ರಮದ ಅಂಗವಾಗಿ ಶುಭ ಕೋರುವ ಬ್ಯಾನರ್‌ ಅಳವಡಿಸಿದ್ದರು. ಸಮಿತಿಯ ಯುವಕರೊಂದಿಗೆ ಸುಳ್ಯ ಶಾಸಕರು ಕುಳಿತಿರುವ ಚಿತ್ರದ ಬ್ಯಾನರ್‌ ಮಧ್ಯ ಭಾಗವನ್ನು ಕತ್ತರಿಸಿ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಕೆಲವು ದಿನಗಳ ಹಿಂದೆ ಸುಳ್ಯ ಖಾಸಗಿ ಬಸ್‌ ನಿಲ್ದಾಣದ ಬಳಿಯಲ್ಲಿ ಅಯೋಧ್ಯೆ ಕಾರ್ಯಕ್ರಮಕ್ಕೆ ಶುಭ ಕೋರಿ ಅಳವಡಿಸಿದ್ದ ಬ್ಯಾನರ್‌ಗೂ ಹಾನಿ ಮಾಡಲಾಗಿತ್ತು, ತನಿಖೆ ವೇಳೆ ಮಾನಸಿಕ ಅಸ್ವಸ್ಥ ವ್ಯಕ್ತಿ ಕೃತ್ಯ ಎಸಗಿರುವುದು ಕಂಡುಬಂದಿತ್ತು. ಘಟನೆ ಖಂಡಿಸಿ ಪ್ರತಿಭಟನೆಯೂ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next