Advertisement
ರಂಜಾನ್ ಹಬ್ಬದ ಪ್ರಯುಕ್ತ ಅಲ್ ಮೋಮಿನಿನ್ ಬೈತುಲ್ ಮಾಲ್ ಕಮಿಟಿಯವರು ಮಂಗಳವಾರ ಎಸ್.ಎಸ್.ಮಲ್ಲಿಕಾರ್ಜುನ್ ನಗರದ ಬೀಡಿ ಲೇಔಟ್ನಲ್ಲಿ ಹಮ್ಮಿಕೊಂಡಿದ್ದ ಬಡ ಹೆಣ್ಣು ಮಕ್ಕಳಿಗೆ ಸೀರೆ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಮಾನವರೆಲ್ಲರೂ ಒಂದೇ. ಜಾತಿ-ಧರ್ಮಗಳು ಅವರವರ ಆಚರಣೆಗಳ ಮೇಲೆ ಅವಲಂಬಿತವಾಗಿವೆ ಎಂದರು.
ಸಂಘ-ಸಂಸ್ಥೆಗಳು ಈ ರೀತಿ ಬಟ್ಟೆಗಳನ್ನು ಹಂಚಿದರೆ ಬಡವರು ಸಹ ಸಂತೋಷದಿಂದ ಹಬ್ಬವನ್ನು ಆಚರಿಸುತ್ತಾರೆ.
ಯಾರು ಬೇರೆಯವರ ಕಷ್ಟಗಳಲ್ಲಿ ಭಾಗಿಯಾಗುತ್ತಾರೆ. ಅಂಥವರು ಸತ್ಪ್ರಜೆಗಳಾಗಿ ಬದುಕನ್ನು ಸಾಗಿಸುತ್ತಾರೆ ಎಂದು ತಿಳಿಸಿದರು.
Related Articles
ತಂದರು. ಇಸ್ಲಾಂ ಧರ್ಮದಲ್ಲಿ ಅಳವಡಿಸಿ ಪ್ರತಿಯೊಬ್ಬ ಶ್ರೀಮಂತರು ಜಕಾತನ್ನು ತೆಗೆದು ಬಡವರಿಗೆ ನೀಡುವುದು ಕಡ್ಡಾಯಗೊಳಿಸಿದ್ದಾರೆ.
Advertisement
ಇಸ್ಲಾಂ ಧರ್ಮದ 5 ತತ್ವಗಳಲ್ಲಿ ಇದನ್ನು ಮುಖ್ಯವಾಗಿ ಪಾಲಿಸಲು ತಿಳಿಸಿದ್ದಾರೆ. ಜಕಾತನ್ನು ನೀಡಿದರೆ ಸಮಾಜದಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಧ್ಯ ಎಂದರು.
ಕಾಂಗ್ರೆಸ್ ಮುಖಂಡ ಸೈಯದ್ ಸೈಪುಲ್ಲಾ, ನಗರಪಾಲಿಕೆ ಸದಸ್ಯ ಫಾರೂಕ್ ಅಬ್ದುಲ್, ನಗರಸಭಾ ಮಾಜಿ ಸದಸ್ಯ ಎ. ಅಲ್ಲಾಭಕ್ಷಿ, ಯುವಮುಖಂಡ ಕೆ. ಹಸನ್, ಹಾಜಿ ಮೂಸಾಸಾಬ್, ಶಫಿವುಲ್ಲಾ, ಶರೀಫ್, ಮಜ್ಜೀದ್, ಆಸಿಫ್, ಸಾಧಿಕ್, ಹಜರತ್ಅಲಿ, ಮುಕ್ತಾರ್ ಉಜ್ಜಿನಿ, ರಫಿಕ್, ಅಫೂಜ್, ಪತ್ರಕರ್ತ ಕೆ.ಎಂ. ಸಿದ್ಧಲಿಂಗಸ್ವಾಮಿ ಇತರರು ಇದ್ದರು. ಪತ್ರಕರ್ತ ಎ. ಫಕ್ರುದ್ದೀನ್ ಸ್ವಾಗತಿಸಿದರು.