Advertisement

ದಾಂಡಿಯಾಕ್ಕೆ ಬರುತ್ತೀರಾ? ಆಧಾರ್‌ ಕೊಡಬೇಕು

01:32 AM Sep 30, 2019 | Team Udayavani |

ಹೊಸದಿಲ್ಲಿ: ನವರಾತ್ರಿ ವೇಳೆ ಆಯೋಜಿಸಲಾಗುವ ದಾಂಡಿಯಾ, ಗರ್ಭಾ ನೃತ್ಯಗಳಿಗೆ ಬರುವವರ ಆಧಾರ್‌ ಕಾರ್ಡ್‌ ಪರಿಶೀಲಿಸಿ. ಹೀಗೆಂದು ನಿರ್ದೇಶನ ನೀಡಿದ್ದು ಬಜರಂಗ ದಳದ ಮಾಧ್ಯಮ ಸಂಯೋಜಕ ಎಸ್‌. ಕೈಲಾಶ್‌. ಈ ಕಾರ್ಯಕ್ರಮಗಳಿಗೆ ಹಿಂದೂಯೇತರರು ಆಗಮಿಸಿ ದಾಂಧಲೆ ಎಬ್ಬಿಸುವುದನ್ನು ತಪ್ಪಿಸುವ ಉದ್ದೇಶದಿಂದ, ಆಯೋಜಕರು ಭಾಗವಹಿಸುವವರ ಆಧಾರ್‌ ಕಾರ್ಡ್‌ ಪರಿಶೀಲಿಸಬೇಕು. ಈ ಮೂಲಕ ಅವರು ಹಿಂದೂಗಳೇ ಹೌದು ಅಥವಾ ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

Advertisement

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಾರೆ. ಇದನ್ನು ತಡೆಯಲು ಈ ಸೂಚನೆ ಹೊರಡಿಸಲಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next