Advertisement

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಎಡಿಜಿಪಿ ಹೆಸರಿಲ್ಲ !

11:24 PM Jul 27, 2022 | Team Udayavani |

ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿಯ ವಿಶೇಷ ತನಿಖಾ ತಂಡ ಬುಧವಾರ ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಆದರೆ, ಪ್ರಕರಣದ ಕಿಂಗ್‌ಪಿನ್‌ ಎಡಿಜಿಪಿ ಅಮೃತ್‌ ಪೌಲ್‌ ಹೆಸರಾಗಲಿ, ಅವರ ಹೇಳಿಕೆಯಾಗಲಿ ಆರೋಪ ಪಟ್ಟಿಯಲ್ಲಿ ಉಲ್ಲೇಖೀಸಿಲ್ಲ. ಆದರೆ, ಅಂತಿಮ ಆರೋಪ ಪಟ್ಟಿ ಸಲ್ಲಿಸುವ ಸಂದರ್ಭ ಅಮೃತ್‌ ಪೌಲ್‌ ಹೆಸರು, ಹೇಳಿಕೆ ಮತ್ತು ಹಣಕಾಸಿನ ವ್ಯವಾಹರದ ಬಗ್ಗೆ ಉಲ್ಲೇಖೀಸಲಾಗುತ್ತದೆ ಎಂದು ಹೇಳಲಾಗಿದೆ.

Advertisement

ಮುಚ್ಚಿದ ಲಕೋಟೆಯಲ್ಲಿ ಸಿಐಡಿ ತನಿಖಾಧಿರಿ ಎಸ್ಪಿ ರಾಘವೇಂದ್ರ ಮತ್ತು ಡಿವೈಎಸ್ಪಿ ಶೇಖರ್‌ ನೇತೃತ್ವದ ತಂಡ ಪ್ರಾಥಮಿಕ ತನಿಖೆ ಪೂರ್ಣಗೊಳಿಸಿದ್ದು, 3065 ಪುಟಗಳ ಆರೋಪಪಟ್ಟಿಯಲ್ಲಿ 202 ಸಾಕ್ಷ್ಯಗಳು, 30 ಮಂದಿ ಆರೋಪಿಗಳು ಹಾಗೂ 330 ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದೆ. 30 ಮಂದಿ ಆರೋಪಿಗಳ ಪೈಕಿ 18 ಮಂದಿ ಅಭ್ಯರ್ಥಿಗಳು, ಐದು ಮಂದಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್‌, ಶ್ರೀನಿವಾಸ್‌, ಮಂಜುನಾಥ್‌ ಸೇರಿ ಐವರು ಸಿಬಂದಿ, ಏಳು ಮಂದಿ ಮಧ್ಯವರ್ತಿಗಳ ಹೆಸರು ಹಾಗೂ ಹೇಳಿಕೆ ಉಲ್ಲೇಖೀಸಲಾಗಿದೆ.

ಡಿವೈಎಸ್ಪಿ ಶಾಂತಕುಮಾರ್‌ ಮತ್ತು ಅಭ್ಯರ್ಥಿಗಳು ಹಾಗೂ ನೇಮಕಾತಿ ವಿಭಾಗದ ಐವರು ಸಿಬಂದಿ ನಡುವೆ ಎರಡೂವರೆ ಕೋಟಿ ರೂ. ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆ ಆರೋಪ ಪಟ್ಟಿಯಲ್ಲಿ ಪ್ರಸ್ತಾವಿಸಲಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next