Advertisement

ಅಲೆಮಾರಿಗಳಿಗೆ ಅಡವಿಸಿದ್ದೇಶ್ವರಮಠ “ಆಸರೆ’’

11:54 AM May 12, 2021 | Team Udayavani |

ಬೆಳಗಾವಿ: ಕೊರೊನಾದ ಈ ಗಂಭೀರ ಸ್ಥಿತಿಯಲ್ಲಿ ಸಮಾಜ ಸೇವೆಗೆ ಮುಂದಾಗಿರುವ ಗೋಕಾಕ ತಾಲೂಕಿನ ಕುಂದರಗಿ ಅಡವಿಸಿದ್ದೇಶ್ವರ ಮಠವು ಕೊರೊನಾದಿಂದ ಸಂಕಷ್ಟಕ್ಕೆ ತುತ್ತಾಗಿರುವ ಅಲೆಮಾರಿ ಕುಟುಂಬಗಳ ಊಟ-ವಸತಿಯ ಜವಾಬ್ದಾರಿ ಹೊತ್ತುಕೊಂಡಿದೆ.

Advertisement

ಕೊರೊನಾದ ಎರಡನೇ ಅಲೆ ನಗರ ಪ್ರದೇಶಗಳಿಗಿಂತ ಈಗ ಹೆಚ್ಚು ಆತಂಕ ಉಂಟು ಮಾಡಿದ್ದು ಗ್ರಾಮೀಣ ಪ್ರದೇಶದಲ್ಲಿ. ಇಲ್ಲಿ ಕೊರೊನಾ ಬಗ್ಗೆ ಸ್ವಲ್ಪ ಜಾಗೃತಿ ಕಡಿಮೆ. ಉದಾಸೀನ ಮನೋಭಾವ ಹೆಚ್ಚು. ಇದು ಸೋಂಕಿನ ಪ್ರಮಾಣ ಇನ್ನೂ ಹೆಚ್ಚಾಗುವಂತೆ ಮಾಡಿದೆ. ಇಂತಹ ಸ್ಥಿತಿಯಲ್ಲಿ ಈ ಹಳ್ಳಿಯ ಜನರಿಗೆ ಮಠಾಧೀಶರ ಸಂದೇಶ ಬಹಳ ಅತ್ಯಗತ್ಯ. ಈ ಮಹತ್ಕಾರ್ಯವನ್ನು ನಾಲ್ಕು ವರ್ಷಗಳ ಹಿಂದೆ ಸ್ಥಾಪಿಸಿದ “ಧರ್ಮವಾಹಿನಿ’ ಮುಖಾಂತರ ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಸ್ವಾಮೀಜಿ ಮಾಡುತ್ತಿದ್ದಾರೆ.

ಸೋಂಕಿಗೆ ತುತ್ತಾಗಿರುವ ಸಮಾಜಕ್ಕೆ ಆತ್ಮವಿಶ್ವಾಸ-ಧೈರ್ಯ ತುಂಬುವ ಕೆಲಸ ಬಹಳ ಪರಿಣಾಮಕಾರಿ ಆಗಬೇಕಿದೆ. ಎಚ್ಚರಿಕೆ ಜತೆ ಸಮಾಜದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಬೇಕಿದೆ. ಅಮರಸಿದ್ದೇಶ್ವರ ಸ್ವಾಮೀಜಿ ತಮ್ಮ ಮಠದ ವ್ಯಾಪ್ತಿಯಲ್ಲಿ ಬರುವ ಗೋಕಾಕ-ಹುಕ್ಕೇರಿ ತಾಲೂಕಿನ 42 ಹಳ್ಳಿಗಳಲ್ಲಿ ಸಂಚರಿಸಿ ಈ ಕಾರ್ಯವನ್ನು ಸಮರ್ಥವಾಗಿ ಮಾಡುತ್ತಿದ್ದಾರೆ. ಸಮಾಜದ ನೆರವಿಗೆ ಬರಲೆಂಬ ಉದ್ದೇಶದಿಂದ ನಿರ್ಮಿಸಿದ ಈ ಮಠದ ಕೊಠಡಿಗಳನ್ನು ಈಗ ಕೊರೊನಾ ಸಂಕಷ್ಟದಲ್ಲಿದ್ದವರಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಯಾರೇ ಅಲೆಮಾರಿಗಳು-ಕಾರ್ಮಿಕರು ಬಂದರೆ ಅವರಿಗೆ ಮಠದಲ್ಲಿ ಊಟ-ವಸತಿ ಸೌಕರ್ಯ ನೀಡಲಾಗುವುದು. ಹಸಿದವರು ಯಾರೇ ಬಂದರೂ ಅವರೇ ನಮಗೆ ದೇವರು. ಅವರನ್ನು ನೋಡಿಕೊಳ್ಳುವುದು ನಮ್ಮ ಧರ್ಮ ಎಂದು ಅಮರಸಿದ್ದೇಶ್ವರ ಸ್ವಾಮೀಜಿ ತಮ್ಮ ಉದ್ದೇಶವನ್ನು “ಉದಯವಾಣಿ’ ಜತೆ ಬಿಚ್ಚಿಟ್ಟರು.

ಕೋವಿಡ್‌ ಕೇರ್‌ ಸೆಂಟರ್‌ ಉದ್ದೇಶ: ಆರೋಗ್ಯ ಇಲಾಖೆ ಸಮ್ಮತಿ ಸಿಕ್ಕರೆ ನಮ್ಮ ಮಠದಲ್ಲಿ 20 ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ ಮಾಡುವ ಉದ್ದೇಶ ಇದೆ. ಸುಮ್ಮನೆ ಮಾಡಿ ಅಸ್ತವ್ಯಸ್ತವಾಗಬಾರದು. ಹೀಗಾಗಿ ಇದರ ಬಗ್ಗೆ ಹೆಚ್ಚು ಆಲೋಚನೆ ಮಾಡಿಲ್ಲ. ಆದರೆ ಅಲೆಮಾರಿಗಳ ಯೋಗಕ್ಷೇಮಕ್ಕೆ ಮಠ ಬದ್ಧವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next