Advertisement

ತಿರುವನಂತಪುರ: ಬಂದರು ನಿರ್ಮಾಣಕ್ಕೆ ಮೀನುಗಾರರ ಭಾರೀ ವಿರೋಧ

10:38 PM Aug 22, 2022 | Team Udayavani |

ತಿರುವನಂತಪುರ: ಕೇರಳ ರಾಜಧಾನಿ ತಿರುವನಂತಪುರ ಸಮೀಪದ ವಿರಿಂಜಾಮ್‌ ಎಂಬಲ್ಲಿ ಅದಾನಿ ಗ್ರೂಪ್‌ ನಿರ್ಮಿಸಲು ಉದ್ದೇಶಿಸಿರುವ ಬಂದರು ಯೋಜನೆಗೆ ಸೋಮವಾರ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.

Advertisement

ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ನಿರ್ಮಾಣವಾಗಿದ್ದ ಕಂಪೌಡ್‌ನ‌ ಗೇಟ್‌ ಅನ್ನು ಪ್ರತಿಭಟನಾಕಾರರ ಒಂದು ಗುಂಪು ಮುರಿದು ಹಾಕಿದೆ. ಜತೆಗೆ ಸ್ಥಳಕ್ಕೆ ತೆರಳುವ ದಾರಿಯನ್ನು ಬಂದ್‌ ಮಾಡಿದೆ. ದೋಣಿಗಳ ಮೂಲಕ ಸಮುದ್ರವನ್ನು ಸಾವಿರಾರು ಮಂದಿ ಸುತ್ತುವರಿದರು.

ಮೀನುಗಾರರು ನಡೆಸುವ ಶಾಂತಿಯುತ ಪ್ರತಿಭಟನೆಗೆ ಕೇರಳ ಕ್ಯಾಥೋಲಿಕ್‌ ಬಿಷಪ್ಸ್‌ ಕೌನ್ಸಿಲ್‌ ಬೆಂಬಲ ವ್ಯಕ್ತಪಡಿಸಿದೆ. ಜತೆಗೆ ಈ ಕೂಡಲೇ ಬಂದರು ನಿರ್ಮಾಣ ಕಾಮಗಾರಿ ನಿಲ್ಲಿಸಬೇಕು ಎಂದು ಒತ್ತಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next