Advertisement

SEBI move; Adani ದೋಷಮುಕ್ತಗೊಳಿಸುವ ಸೂಚಕವೇ: ಕಾಂಗ್ರೆಸ್ ಪ್ರಶ್ನೆ

05:27 PM May 25, 2023 | Team Udayavani |

ಹೊಸದಿಲ್ಲಿ: ಕೆಲವು ವಿದೇಶಿ ನಿಧಿಗಳನ್ನು ಹೊಂದಿರುವ ಹಣಕಾಸು ಸಂಸ್ಥೆಗಳ ವಿವರಗಳನ್ನು ಸೆಬಿ ಕೇಳಿದ್ದು, ಮಾರುಕಟ್ಟೆ ನಿಯಂತ್ರಕ ಇದನ್ನು ಈಗಲೇ ಜಾರಿಗೊಳಿಸಬಹುದೇ ಅಥವಾ ಅದಾನಿ ಗುಂಪನ್ನು ದೋಷಮುಕ್ತಗೊಳಿಸುವ ಮತ್ತೊಂದು ಸೂಚಕವೇ ಎಂದು ಕಾಂಗ್ರೆಸ್ ಗುರುವಾರ ಪ್ರಶ್ನಿಸಿದೆ.

Advertisement

ಮಾಧ್ಯಮ ವರದಿಯನ್ನು ಉಲ್ಲೇಖಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿ “ನಾವು ಪ್ರಯತ್ನಿಸಿದ್ದೇವೆ ಆದರೆ ವಿಫಲರಾಗಿದ್ದೇವೆ…”ಎಂದು ಹೇಳಲು ಈ ಕ್ರಮವು ತಡವಾಗಿ ಸಾರ್ವಜನಿಕ ಗಮನಸೆಳೆಯುವ ಪ್ರಯತ್ನವೇ? ಸರ್ವೋಚ್ಚ ನ್ಯಾಯಾಲಯ ನೀಡಿರುವ ನಿಗದಿತ ಗಡುವಿನ ಮೊದಲು ಅದಾನಿ ವಿಚಾರದ ಕುರಿತು ಸೆಬಿ ತನ್ನ ತನಿಖೆಯನ್ನು ಹೇಗೆ ಪೂರ್ಣಗೊಳಿಸುತ್ತದೆ ಎಂದು ಕೇಳಿದ್ದಾರೆ.

ಅದಾನಿ ಗ್ರೂಪ್‌ನ ಷೇರು ಬೆಲೆ ಕುಶಲತೆಯ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಆಗಸ್ಟ್ 14 ರವರೆಗೆ ಕಾಲಾವಕಾಶವನ್ನು ನೀಡಿ, ತನಿಖಾ ದಾಖಲೆಯ ನವೀಕರಿಸಿದ ಸ್ಥಿತಿ ವರದಿಯನ್ನು ದಾಖಲಿಸುವಂತೆ ಕೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next