Advertisement

ಅದಾನಿ ಸಮೂಹ: ಕಿಶೋರ್‌ ಆಳ್ವ ಅಧ್ಯಕ್ಷರಾಗಿ ಪದೋನ್ನತಿ

12:45 AM Mar 03, 2019 | |

ಪಡುಬಿದ್ರಿ: ದೇಶದ ಔದ್ಯಮಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅದಾನಿ ಸಂಸ್ಥೆಯು ಕಿಶೋರ್‌ ಆಳ್ವ ಅವರನ್ನು ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಪದೋನ್ನತಿಗೊಳಿಸಿದ್ದು, ದಕ್ಷಿಣ ಭಾರತದಲ್ಲಿ ಸಮೂಹದ ವಿವಿಧ ಯೋಜನೆಗಳ ನಿರ್ವಹಣೆಯ ಹೊಣೆಯನ್ನು ಅವರು ನಿರ್ವ ಹಿಸಲಿದ್ದಾರೆ.

Advertisement

ದ.ಕ. ಮೂಲದ ಆಳ್ವ ಅವರು ಅದಾನಿ ಸಂಸ್ಥೆಯಲ್ಲಿ ಜಂಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರತಿಷ್ಠಿತ ಬೆಂಗಳೂರು ಚೇಂಬರ್‌ ಆಫ್ ಕಾಮರ್ಸ್‌ ಮತ್ತು ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿಯೂ ಅವರು ಗೌರವ ಸೇವೆ ಸಲ್ಲಿಸುತ್ತಿದ್ದಾರೆ.

ಕೈಗಾರಿಕಾ ಕ್ಷೇತ್ರದ ಮ್ಯಾನೇಜ್‌ಮೆಂಟ್‌ ಹುದ್ದೆಗಳಲ್ಲಿ ಸುಮಾರು 24 ವರ್ಷಗಳ ಸುದೀರ್ಘ‌ ಅನುಭವ ಹೊಂದಿರುವ ಆಳ್ವರು ದೇಶ-ವಿದೇಶಗಳ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರಾದ ಕಿಶೋರ್‌ ಆಳ್ವ ಸಂತ ಅಲೋಶಿಯಸ್‌ ಕಾಲೇಜು ಹಾಗೂ ಬೆಂಗಳೂರಿನ ನ್ಯಾಷನಲ್‌ ಪಬ್ಲಿಕ್‌ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next