Advertisement

ಅಪ್ಪು ಸಾವಿಗೆ ಜಿಮ್ ಕಾರಣವಲ್ಲ: ನೆನಪಿರಲಿ ಪ್ರೇಮ್

07:12 PM Nov 06, 2021 | Team Udayavani |

ಮಂಡ್ಯ: ದಿ.ಪುನೀತ್‌ ರಾಜ್‌ಕುಮಾರ್ ಅವರ ಸಾವಿನಿಂದ ಜಿಮ್ ಬಗ್ಗೆ ಜನರಿಗೆ ತಪ್ಪಾದ ಸಂದೇಶ ರವಾನೆಯಾಗಿದೆ. ಶೇ.90ರಷ್ಟು ಮಂದಿ ಜಿಮ್‌ನಿಂದ ವಿಮುಖರಾಗಿದ್ದು, ಜಿಮ್ ಮಾತ್ರವೇ ಅವರ ಸಾವಿಗೆ ಕಾರಣ ಎಂಬುದು ತಪ್ಪು ಎಂದು ಚಿತ್ರನಟ ನೆನಪಿರಲಿ ಪ್ರೇಮ್ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುನೀತ್ ಅವರ ಸಾವಿನ ಬಳಿಕ ನನ್ನ ಅಭಿಮಾನಿಗಳು ಹಾಗೂ ಸ್ನೇಹಿತರು ಜಿಮ್ ಬಿಟ್ಟು ಬಿಡುವಂತೆ ಸಲಹೆ ನೀಡಿದರು. ಈ ರೀತಿ ತಪ್ಪು ಕಲ್ಪನೆ ಬೇಡ ಅತಿಯಾದ ಜಿಮ್‌ನಿಂದ ಸಮಸ್ಯೆಯಾಗಬಹುದು. ಆದರೆ ಮನುಷ್ಯ ದೇಹ ದಂಡಿಸಲಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಅಪ್ಪು ಅವರು ನನ್ನ ಕುಟುಂಬಕ್ಕೆ ಅತ್ಯಂತ ಪ್ರೀತಿಯನ್ನು ತೋರಿದ್ದು, ಅವರೊಂದಿಗೆ ಕಳೆದ ಸಮಯದಲ್ಲಿ ನನ್ನ ಮಕ್ಕಳನ್ನು ತಮ್ಮ ಬಳಿಯೇ ಉಳಿಸಿಕೊಂಡು ಕಾಲ ಕಳೆಯುತ್ತಿದ್ದರು. ಅಪ್ಪು ಅವರು ಹಲವು ನಿರ್ದೇಶಕರ ಕಾಲ್ಪನಿಕ ರಾಜಕುಮಾರ. ಸಾಕಷ್ಟು ನಿರ್ದೇಶಕರು ಅವರಿಗಾಗಿಯೇ ಕಥೆ ಮಾಡಿಕೊಂಡು ಅವರೊಂದಿಗೆ ಕಲಸ ಮಾಡಲು ಹಾತೊರೆಯುತ್ತಿದ್ದರು. ಪುನೀತ್ ರಾಜ್‌ಕುಮಾರ್ ಅವರ ಸಾವು ಎಲ್ಲರಿಗೂ ಸಂಕಷ್ಟವನ್ನು ತಂದೊಡ್ಡಿದೆ ಎಂದು ಭಾವುಕರಾದರು.

ಪ್ರೇಮಂಪೂಜ್ಯಂಗೆ ಬೆಂಬಲ ನೀಡಿ:

ಪ್ರೇಮಂಪೂಜ್ಯ ಚಿತ್ರದ ನಿರ್ದೇಶಕ ಡಾ.ರಾಘವೇಂದ್ರ ಮಾತನಾಡಿ, ಲವ್ಲಿ ಸ್ಟಾರ್ ಪ್ರೇಮ್ ನಟನೆಯ 25ನೇ ಚಲನಚಿತ್ರ ಪ್ರೇಮಂ ಪೂಜ್ಯಂ ನ.12ರಂದು ತೆರೆ ಕಾಣಲಿದ್ದು, ನಾನು ವೃತ್ತಿಯಲ್ಲಿ ವೈದ್ಯನಾಗಿದ್ದು, ಸಾಹಿತ್ಯ, ಸಂಗೀತ, ಚಿತ್ರಕಥೆ ಬರೆಯುವ ಹವ್ಯಾಸ ಹೊಂದಿದ್ದೆ. ಹವ್ಯಾಸಿ ಚಿತ್ರಕಥೆಕಾರನಾಗಿದ್ದ ನಾನು ಕಥೆಯೊಂದನ್ನು ರಚಿಸಿ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಪರಿಚಯಿಸಿದ್ದ ವೇಳೆ ಅವರು ಚಲನಚಿತ್ರ ಮಾಡಲು ಸ್ಫೂರ್ತಿ ತುಂಬಿದ್ದರು ಎಂದರು.

Advertisement

ಕಳೆದ 5 ವರ್ಷಗಳ ವೈದ್ಯ ವೃತ್ತಿಯ 125 ದಿನಗಳ ರಜೆಯಲ್ಲಿ ಸಂಪೂರ್ಣವಾಗಿ ಚಲನಚಿತ್ರ ನಿರ್ದೇಶನದಲ್ಲಿ ತೊಡಗಿ, ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಎಲ್ಲ ವರ್ಗದವರು ಕುಳಿತು ಚಲನಚಿತ್ರ ವೀಕ್ಷಿಸಬಹುದಾದ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. ಮಂಡ್ಯ-ಮಳವಳ್ಳಿಯಿಂದ ಪ್ರಾರಂಭಗೊಂಡ ಚಿತ್ರೀಕರಣವು ಊಟಿ, ಮುನಾರ್, ವಿಯೆಟ್ನಾಂ, ಚೀನಾ ಗಡಿಯವರೆಗೆ 18 ರಿಂದ 20 ಕೋಟಿ ರೂ. ವೆಚ್ಚದಲ್ಲಿ ಚಿತ್ರೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಂಬಂಗಳು, ಸಹೋದ್ಯೋಗಿಗಳು, ಗೆಳೆಯರು, ಪ್ರೇಯಸಿ ಸೇರಿದಂತೆ ಎಲ್ಲರ ಮೇಲಿನ ಪ್ರೀತಿಯನ್ನು ಪೂಜ್ಯನೀಯ ಮನೋಭಾವದಿಂದ ನೋಡಿದಾಗ ಅದರಿಂದ ಹೊರಬರುವ ಫಲಿತಾಂಶ ಏನು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ತಿಳಿಸಿದರು.

ಚಿತ್ರವು ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಳ್ಳಲಿದ್ದು, ಕನ್ನಡ, ತಮಿಳು, ತೆಲುಗು, ಮಳಯಾಳಂ ಹಿಂದಿ ಮತ್ತು ಇಂಗ್ಲಿಷ್‌ನ ಸಬ್‌ಟೈಟಲ್‌ನೊಂದಿಗೆ ಲಭ್ಯವಿದೆ. ನಿರ್ದೇಶಕರು ನನ್ನನ್ನು ಏಳು ಅವತಾರಗಳಲ್ಲಿ ತೋರಿಸಿದ್ದು, ಅಭಿಮಾನಿಗಳು ಚಲನಚಿತ್ರವನ್ನು ಹೇಗೆ ಸ್ವಾಗತಿಸಲಿದ್ದಾರೆ ಎಂಬುದನ್ನು ಕಾಣಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

ನಟ ಮಾಸ್ಟರ್ ಆನಂದ್ ಮಾತನಾಡಿ, ಚಲನಚಿತ್ರಗಳಲ್ಲಿ ಕಥೆಗೆ ಸಂಬಂಧವಿಲ್ಲದಂಥ ಪಾತ್ರಗಳಲ್ಲಿ ನಟಿಸುತ್ತಿದ್ದೆ. ಮುಂದಿನ ದಿನಗಳಲ್ಲಿ ಕಥೆಗೆ ಸಂಬಂಧಿಸಿದಂತಹ ಪಾತ್ರಗಳಲ್ಲಿ ನಟಿಸುವ ಉದ್ದೇಶ ಹೊಂದಿದ್ದೆ. ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಅಂತದೊಂದು ಪಾತ್ರ ದೊರೆತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next