Advertisement

Vaishnavi Gowda: ಸಿನಿಮಾ-ಸೀರಿಯಲ್‌ ಎಂಬ ಭೇದ-ಭಾವ ನನಗಿಲ್ಲ…: ‘ಸೀತಾರಾಮ’ ನಟಿಯ ಮಾತು

02:38 PM Aug 28, 2023 | Team Udayavani |

ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವೈಷ್ಣವಿ ಗೌಡ ಈಗ “ಸೀತಾರಾಮ’ ಎಂಬ ಹೊಸ ಧಾರಾವಾಹಿಗೆ ನಾಯಕಿಯಾಗಿದ್ದಾರೆ. ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಧಾರಾವಾಹಿ ವೈಷ್ಣವಿಗೆ ಒಳ್ಳೆಯ ಹೆಸರು ತಂದುಕೊಡುತ್ತಿದೆ. ಸದ್ಯ ಪ್ರೇಕ್ಷಕರ ಮನಗೆಲ್ಲುತ್ತಿರುವ ಈ ಧಾರಾವಾಹಿ ಕುರಿತು ವೈಷ್ಣವಿ ಮಾತನಾಡಿದ್ದಾರೆ

Advertisement

“ಸೀತಾರಾಮ’ ಸೀರಿಯಲ್‌ಗೆ ಪ್ರೇಕ್ಷಕರ ರೆಸ್ಪಾನ್ಸ್‌ ಹೇಗಿದೆ?

ತುಂಬಾ ಚೆನ್ನಾಗಿದೆ. ದಿನದಿಂದ ದಿನಕ್ಕೆ “ಸೀತಾರಾಮ’ ಧಾರಾವಾಹಿಯನ್ನು ನೋಡುತ್ತಿರುವ ಪ್ರೇಕ್ಷಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಫ್ಯಾಮಿಲಿ ಆಡಿಯನ್ಸ್‌ಗೆ ಧಾರಾವಾಹಿ ಇಷ್ಟವಾಗುತ್ತಿದೆ. ಮನೆಮಂದಿ ಎಲ್ಲರೂ ಒಟ್ಟಾಗಿ ಕೂತು ನೋಡುವಂತಹ ಕಥೆ “ಸೀತಾರಾಮ’ದಲ್ಲಿದೆ.

ಸೀರಿಯಲ್‌ನಲ್ಲಿ “ಸೀತಾ’ ಪಾತ್ರವನ್ನು ನೋಡಿದವರು ಏನಂತಿದ್ದಾರೆ?

ಮೊದಲಿನಿಂದಲೂ ಸೀರಿಯಲ್‌ನಲ್ಲಿ ನನಗೆ ಒಂದಕ್ಕಿಂತ ಒಂದು ಒಳ್ಳೆಯ ಪಾತ್ರಗಳು ಸಿಗುತ್ತಿವೆ. “ಸೀತಾರಾಮ’ ಸೀರಿಯಲ್‌ನಲ್ಲೂ ಅಂಥದ್ದೇ ಒಂದು ಒಳ್ಳೆಯ “ಸೀತಾ’ ಪಾತ್ರ ಸಿಕ್ಕಿದೆ. ನನ್ನ ಪಾತ್ರಕ್ಕೆ ಕೂಡ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಆಡಿಯನ್ಸ್‌, ಫ್ರೆಂಡ್ಸ್‌-ಫ್ಯಾಮಿಲಿ ಎಲ್ಲರೂ ನನ್ನ ಪಾತ್ರ ಮೆಚ್ಚಿಕೊಳ್ಳುತ್ತಿದ್ದಾರೆ.

Advertisement

ಸಿನಿಮಾಕ್ಕೆ ಬಂದು ಮತ್ತೆ ಸೀರಿಯಲ್‌ನತ್ತ ಹೋಗಲು ಕಾರಣ?

ನನಗೆ ಸಿನಿಮಾ ಅಥವಾ ಸೀರಿಯಲ್‌ ಅಂಥ ಯಾವುದೇ ಬೇಧ-ಭಾವವಿಲ್ಲ. ನಾನೊಬ್ಬಳು ಕಲಾವಿದೆ ಅಷ್ಟೇ. ಒಬ್ಬ ಕಲಾವಿದೆಯಾಗಿ ನನಗೆ ಸಿನಿಮಾದಲ್ಲಿ ಇಷ್ಟವಾಗುವಂಥ ಒಳ್ಳೆಯ ಪಾತ್ರ ಸಿಕ್ಕರೂ ಮಾಡುತ್ತೇನೆ, ಸೀರಿಯಲ್‌ನಲ್ಲಿಸಿಕ್ಕರೂ ಮಾಡುತ್ತೇನೆ. ಎರಡರ ನಡುವೆ ನನಗೇಗೂ ವ್ಯತ್ಯಾಸವಿಲ್ಲ.

ಇತ್ತೀಚೆಗೆ ಹೊಸ ಸಿನಿಮಾವೊಂದಕ್ಕೆ ನಾಯಕಿಯಾಗಿದ್ದೀರಿ?

ಹೌದು, “ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಎಂಬ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದೇನೆ. ಈ ಸಿನಿಮಾದಲ್ಲಿ ಕವಿತಾ ಎಂಬ ಪಾತ್ರದಲ್ಲಿ ಅಭಿನಯಿಸು ¤ದ್ದೇನೆ. ಇದೇ ವರಮಹಾಲಕ್ಷ್ಮೀ ಹಬ್ಬದಂದು ಈ ಸಿನಿಮಾದ ಮುಹೂರ್ತ ನೆರವೇರಿತು. ಸದ್ಯ ಈ ಸಿನಿಮಾದ ಶೂಟಿಂಗ್‌ ಶುರುವಾಗಿದೆ.

ಇಷ್ಟು ವರ್ಷಗಳ ನಟನಾ ಬದುಕು ಏನನಿಸುತ್ತಿದೆ?

ತುಂಬಾ ಚೆನ್ನಾಗಿದೆ. ಜನರು ಗುರುತಿಸಿ ಮಾತನಾಡಿಸುವಂಥ ಸಾಕಷ್ಟು ಒಳ್ಳೆಯ ಪಾತ್ರಗಳು ಸಿಕ್ಕಿದೆ. ಈಗಲೂ ಒಳ್ಳೆಯ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ನಟಿಯಾಗಿ ನನಗೆ ಈ ಪ್ರಯಾಣ ಖುಷಿಕೊಟ್ಟಿದೆ. ನಾನು ಕೂಡ ನನ್ನ ಕೆಲಸವನ್ನು ತುಂಬ ಪ್ರೀತಿಯಿಂದ ಎಂಜಾಯ್‌ ಮಾಡಿಕೊಂಡು ಮಾಡುತ್ತಿದ್ದೇನೆ

Advertisement

Udayavani is now on Telegram. Click here to join our channel and stay updated with the latest news.

Next