Advertisement

ನನಗೆ ರಕ್ಷಣೆ ಬೇಕು,ತಂದೆಯೇ ನನ್ನನ್ನು ಕೊಲ್ಲಲು ಬರುತ್ತಿದ್ದಾರೆ: ಕಣ್ಣೀರಿಟ್ಟ ಕಿರುತೆರೆ ನಟಿ

01:17 PM Aug 27, 2020 | keerthan |

ಮುಂಬೈ: ಹಿಂದಿಯ ಪ್ರಸಿದ್ಧ ಕುಂಕುಮ ಭಾಗ್ಯ ಧಾರವಾಹಿ ನಟಿ ತೃಪ್ತಿ ಶಂಖಧರ್ ಈಗ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. ಅದೂ ಕೂಡಾ ತಂದೆಯಿಂದಲೇ. ಸಾಮಾಜಿಕ ಜಾಲತಾಣದಲ್ಲಿ ತನ್ನ ಭಯ ತೋಡಿಕೊಂಡಿರುವ ತೃಪ್ತಿ, ನನ್ನ ತಂದೆ ನನ್ನನ್ನು ಕೊಲ್ಲಲು ನೋಡುತ್ತಿದ್ದಾರೆ. ನನಗೆ ರಕ್ಷಣೆ ಬೇಕು ಎಂದಿದ್ದಾರೆ.

Advertisement

19ರ ಹರೆಯದ ತೃಪ್ತಿ ಉತ್ತರ ಪ್ರದೇಶದ ಬರೇಲಿ ಮೂಲದವರು. ನಟಿಯಾಗಬೇಕೆಂದು ಉತ್ತರ ಪ್ರದೇಶದಿಂದ ಮುಂಬೈಗೆ ತೃಪ್ತಿಯನ್ನು ಕಳುಹಿಸಿಕೊಟ್ಟಿದ್ದರು ಆಕೆಯ ತಂದೆ ರಾಮ್ ರತನ್ ಶಂಖಧರ್.

ಮುಂಬೈಗೆ ಬಂದಿದ್ದ ತೃಪ್ತಿ ಕುಂಕುಮ್ ಭಾಗ್ಯ ಧಾರವಾಹಿಯಲ್ಲಿ ನಟಿಸಿದ್ದಳು. ಅದಲ್ಲದೆ ದಕ್ಷಿಣ ಭಾರತದ ಚಿತ್ರಗಳಲ್ಲಿಯೂ ನಟಿಸಿದ್ದಳು. ಆದರೆ ಸದ್ಯ ಆಕೆಯ ಮದಯವೆಯನ್ನು ತಾನು ನೋಡಿದ ಹುಡುಗನ ಜೊತೆ ಮಾಡಬೇಕೆಂದು ತಂದೆ ರಾಮ್ ರತನ್ ಬಯಸುತ್ತಿದ್ದಾರಂತೆ. ಆತ ನಿಶ್ಚಯಿಸಿದ ಹುಡುಗ ತೃಪ್ತಿಗಿಂತ 9 ವರ್ಷ ಹಿರಿಯವನಾಗಿದ್ದು, ತೃಪ್ತಿಗೆ ವಿರೋಧಿಸಿದ್ದಾರೆ. ತಾನು ನೋಡಿದ ಯುವಕನೊಂದಿಗೆ ಮದುವೆಯಾಗಬೇಕು ಇಲ್ಲವಾದಲ್ಲಿ ಮಗಳಿಗಾಗಿ ತಾನು ಮಾಡಿದ ಎಲ್ಲಾ ಖರ್ಚು ಹಣವನ್ನು ನೀಡಬೇಕೆಂದು ರಾಮ್ ರತನ್ ಪಟ್ಟು ಹಿಡಿದಿದ್ದಾನೆ ಎಂದು ತೃಪ್ತಿ ಆರೋಪಿಸಿದ್ದಾರೆ.

ಅದಲ್ಲದೆ ತಂದೆ ನನ್ನ ಕೂದಲು ಹಿಡಿದು ಗೋಡೆಗೆ ಬಡಿದಿದ್ದಾರೆ. ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದಾರೆ ಎಂದು ತೃಪ್ತಿ ಆರೋಪಿಸಿದ್ದಾರೆ. ತೃಪ್ತಿಯ ತಾಯಿ ಮತ್ತು ಸಹೋದರ ಮನೆ ತೊರೆದಿದ್ದು, ತೃಪ್ತಿಯ ಜೊತೆ ಆಗಮಿಸಿದ್ದಾರೆ. ನಮಗೆಲ್ಲರಿಗೂ ಜೀವ ಭಯವಿದೆ. ನಮಗೆ ಪೊಲೀಸರು ರಕ್ಷಣೆ ನೀಡಬೇಕು ಎಂದು ನಟಿ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ ಹೇಳಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next