Advertisement

ಸಾವಿತ್ರಿ ಆದ ತಾರಾ

02:48 PM Nov 06, 2020 | Suhan S |

ಕನ್ನಡ ಚಿತ್ರರಂಗದಲ್ಲಿಕಳೆದ ಮೂರು ದಶಕಗಳಿಂದ  ನೂರಾರು ಪಾತ್ರಗಳಿಗೆ ಜೀವತುಂಬಿ, ಸಿನಿಪ್ರಿಯರ ಮನರಂಜಿಸಿರುವ ನಟಿ ತಾರಾ ಅನುರಾಧ ಈಗ “ಸಾವಿತ್ರಿ’ ಆಗಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

Advertisement

ಹೌದು, ತಾರಾ ಅಭಿನಯಿಸುತ್ತಿರುವ ಹೊಸಚಿತ್ರಕ್ಕೆ “ಸಾವಿತ್ರಿ’ ಎಂದು ಹೆಸರಿಡಲಾಗಿದೆ. ಇದೇ ನ.19 ರಿಂದ ಬೆಂಗಳೂರು ಸುತ್ತಮುತ್ತ ಸುಮಾರು45 ದಿನಗಳಕಾಲ ಈಚಿತ್ರದ ಚಿತ್ರೀಕರಣ ನಡೆಯಲಿದೆ. “ಪಿಎನ್‌ಪಿ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಸಾಫ್ಟ್ವೇರ್‌ ಉದ್ಯೋಗಿ ಪ್ರಶಾಂತ್‌ಕುಮಾರ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಉಯ್ನಾಲೆ’ ಚಿತ್ರವನ್ನು ನಿರ್ದೇಶಿಸಿದ್ದ ಎಸ್‌. ದಿನೇಶ್‌ ಈ ಚಿತ್ರಕ್ಕೆಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರ ಸಾಹಿತಿ ಹೃದಯ ಶಿವ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದು, ಚಿತ್ರಕ್ಕೆ ಸಂಗೀತದ ಜೊತೆಗೆ ಸಾಹಿತ್ಯ, ಸಂಭಾಷಣೆಯನ್ನೂ ಬರೆಯುತ್ತಿದ್ದಾರೆ.

ಉಳಿದಂತೆ “ಸಾವಿತ್ರಿ’ ಚಿತ್ರದಲ್ಲಿ ತಾರಾ ಅವರೊಂದಿಗೆ ಪ್ರಕಾಶ್‌ ಬೆಳವಾಡಿ, ಸಂಜು ಬಸಯ್ಯ, ಬೇಬಿ ಲೈಲಾ, ಪ್ರಮೋದ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಅಂದಹಾಗೆ, ಸ್ಮಾರ್ಟ್‌ಫೋನ್‌ ಮೊದಲಾದ ಆಧುನಿಕ ತಂತ್ರಜ್ಞಾನ ಮತ್ತು ಉಪಕರಣಗಳು ಮಕ್ಕಳ ಮೇಲೆ ಏನೆಲ್ಲ ಪರಿಣಾಮ ಬೀರುತ್ತದೆ ಎನ್ನುವುದರ ಸುತ್ತ ಈ ಚಿತ್ರದಕಥೆ ನಡೆಯುತ್ತದೆ ಎನ್ನುತ್ತದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next