Advertisement

ಬರ್ತ್‌ ಡೇ ಕಟೌಟ್‌ ನಿಲ್ಲಿಸುವ ವೇಳೆ ದುರಂತ: ಮೃತ ಅಭಿಮಾನಿಗಳ ಮನೆಗೆ ಭೇಟಿ ನೀಡಲಿದ್ದಾರೆ ಯಶ್

02:02 PM Jan 08, 2024 | Team Udayavani |

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹುಟ್ಟುಹಬ್ಬದಂದೇ ಅವರ ಮೂವರು ಅಭಿಮಾನಿಗಳು ವಿದ್ಯುತ್‌ ಅವಘಡಕ್ಕೆ ಬಲಿಯಾಗಿದ್ದು, ಈ ಸುದ್ದಿಯಿಂದ ಅವರ ಅಭಿಮಾನಿಗಳ ವಲಯದಲ್ಲಿ ದುಃಖ ಮನೆಮಾಡಿದೆ.

Advertisement

ಏನಿದು ಘಟನೆ: ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ 10 ಕ್ಕೂ ಹೆಚ್ಚಿನ ಯುವಕರು ತನ್ನ ನೆಚ್ಚಿನ ನಟ ಯಶ್ ಜನ್ಮದಿನದ ಅಂಗವಾಗಿ ಕಟೌಟ್ ನಿಲ್ಲಿಸಲು ಮುಂದಾಗಿದ್ದರು. ಇನ್ನೇನು ಕಟೌಟ್‌ ಬೃಹತ್‌ ಕಟೌಟನ್ನು ನಿಲ್ಲಿಸಬೇಕೆನ್ನುವಷ್ಟರಲ್ಲೇ ಕಟೌಟ್‌ ಮೇಲಕ್ಕೆ ಎತ್ತಿದಾಗ, ಹೈ ಟೆನ್ಷನ್‌ ಕರೆಂಟ್‌ ತಾಗಿದೆ. ಪರಿಣಾಮಸೂರಣಗಿ ಗ್ರಾಮದ ಹನುಮಂತ ಮಜ್ಜುರಪ್ಪ ಹರಿಜನ(21), ಮುರಳಿ ನೀಲಪ್ಪ ನಡವಿನಮನಿ(20), ನವೀನ ನೀಲಪ್ಪ ಗಾಜಿ(19) ಸ್ಥಳದಲ್ಲೇ ಮೃತಪಟ್ಟಿದ್ದಾರೆ.‌

ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಲಕ್ಷ್ಮೇಶ್ವರ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಯಶ್‌ ಭೇಟಿ:  ಇನ್ನು ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ನಟ ಯಶ್ ಹುಟ್ಟುಹಬ್ಬವನ್ನು ಬಿಟ್ಟು, ತನ್ನ ಅಭಿಮಾನಿಗಳ ನಿಧನದ ಸುದ್ದಿ ತಿಳಿದು ಅವರ ಕುಟುಂಬಸ್ಥರನ್ನು ಭೇಟಿ ನೀಡಿ ಸಾಂತ್ವನ ಹೇಳಲಿದ್ದಾರೆ.

ವಿಶೇಷ ವಿಮಾನದಲ್ಲಿ ಪ್ರಯಾಣಿಸಿ,ಅಲ್ಲಿಂದ ಮೃತ ಅಭಿಮಾನಿಗಳ ಗ್ರಾಮವಾದ ಸೂರಣಗಿಗೆ ಭೇಟಿ ನೀಡಲಿದ್ದಾರೆ. ಸಂಜೆ 4 ಗಂಟೆಯ ವೇಳೆ ಯಶ್‌ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next