Advertisement

ವಾಸ್ತವದ ಬಗ್ಗೆಯೇ ನಟ ರೈ ಮಾತನಾಡಿದ್ದಾರೆ

11:43 AM Oct 04, 2017 | Team Udayavani |

ಬೆಂಗಳೂರು: ಪ್ರಸಿದ್ಧ ನಟ ಪ್ರಕಾಶ್‌ ರೈ ಬಗ್ಗೆ ಸಂಸದ ಪ್ರತಾಪ್‌ಸಿಂಹ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿ ಡಿವೈಎಫ್ಐ ಮತ್ತು ಎಸ್‌ಎಫ್ಐ ಕಾರ್ಯಕರ್ತರು ಮಂಗಳವಾರ ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. “ನಮ್ಮ ಕಣ್ಮುಂದೆ ಇಂದು ನಡೆಯುತ್ತಿರುವ ವಾಸ್ತವದ ಬಗ್ಗೆಯೇ ಪ್ರಕಾಶ್‌ ರೈ ಮಾತನಾಡಿದ್ದಾರೆ.

Advertisement

ಆದರೆ, ಇದನ್ನು ಸಹಿಸಿಕೊಳ್ಳದ ಸಂಸದ ಪ್ರತಾಪ್‌ ಸಿಂಹ ಅತ್ಯಂತ ಕೀಳಾಗಿ ಹೇಳಿಕೆ ನೀಡಿದ್ದಾರೆ. ರೈ ಅವರ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿರುವುದು ಸರಿ ಅಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಪ್ರಕಾಶ್‌ ರೈ ಪರ ನಾವಿದ್ದೇವೆ.

ಯಾವುದೇ ಕಾರಣಕ್ಕೂ ದೃತಿಗೆಡುವುದು ಬೇಡ’ ಎಂದು ಬೆಂಬಲ ಸೂಚಿಸಿದ ಪ್ರತಿಭಟನಾಕಾರರು, ಪ್ರತಾಪ್‌ ಸಿಂಹ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಎಸ್‌ಎಫ್ಐ ಸಂಘಟನೆ ರಾಜ್ಯ ಮುಖಂಡ ಗುರುರಾಜ್‌, ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ, ಜನವಾದಿ ಸಂಘಟನೆ ನಾಯಕಿ ವಿಮಲಾ ಮತ್ತಿತರರು ನೇತೃತ್ವ ವಹಿಸಿದ್ದರು. 

ಪ್ರಗತಿಪರರ ಸಾಥ್‌: ಅದೇ ರೀತಿ, ಮತ್ತೂಂದೆಡೆ ಪ್ರಕಾಶ್‌ ರೈ ಬೆಂಬಲಿಸಿ ಮತ್ತು ಪ್ರತಾಪ್‌ ಸಿಂಹ ಅವರ ಹೇಳಿಕೆ ಖಂಡಿಸಿ ಪ್ರಗತಿಪರರು ಹಾಗೂ ಸಮಾನ ಮನಸ್ಕರರು ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಹಕ್ಕು. ಅದಕ್ಕೆ ಧಕ್ಕೆಯಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಪ್ರಕಾಶ್‌ ರೈ ಅವರ ಪರ ನಾವಿದ್ದೇವೆ ಎಂದು ಘೋಷಣೆ ಕೂಗಿ ಬೆಂಬಲ ಸೂಚಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next