Advertisement

ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ತಮಿಳು ನಟ ಮನ್ಸೂರ್‌

04:06 PM Jun 23, 2018 | udayavani editorial |

ಕೊಯಮುತ್ತೂರು : ಹತ್ತು ಸಾವಿರ ಕೋಟಿ ರೂ. ವೆಚ್ಚದ ಚೆನ್ನೈ ಸೇಲಂ ಗ್ರೀನ್‌ಫೀಲ್ಡ್‌ ಹೈವೇ ಯೋಜನೆಯ ವಿರುದ್ಧ ಮಾತನಾಡಿ ಜನರನ್ನು ದೊಂಬಿಗೆ ಪ್ರಚೋದಿಸಿದ ಆರೋಪದ ಮೇಲೆ ಕಳೆದ ಜೂನ್‌ 14ರಂದು ಬಂಧಿತರಾಗಿ ಪ್ರಕೃತ ಸೇಲಂ ಸಮೀಪದ ಕೇಂದ್ರ ಬಂಧೀಖಾನೆಯಲ್ಲಿ ಇರುವ ತಮಿಳು ನಟ ಮನ್ಸೂರ್‌ ಅಲಿ ಖಾನ್‌ ಇಂದು ಶನಿವಾರ ಯೋಜನೆ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

Advertisement

10,000 ಕೋಟಿ ರೂ ವೆಚ್ಚದ ಈ ಯೋಜನೆಯನ್ನು ತಮಿಳು ನಾಡು ಸರಕಾರ ಮುಂದುವರಿಸಿದಲ್ಲಿ ತಾನು ಕನಿಷ್ಠ ಎಂಟು ಮಂದಿಯನ್ನು ಕೊಚ್ಚಿ ಕೊಲ್ಲುವುದಾಗಿ ಮನ್ಸೂರ್‌ ಅಲಿ ಖಾನ್‌ ಬೆದರಿಕೆ ಹಾಕಿದ್ದರು. ಇಂದು ಶನಿವಾರ ಬೆಳಗ್ಗಿನಿಂದ ಅವರು ಜೈಲಿನಲ್ಲಿ ಆಹಾರ ಸ್ವೀಕರಿಸುವುದನ್ನು ನಿಲ್ಲಿಸಿರುವುದಾಗಿ ವರದಿಯಗಿದೆ.

ಸೇಲಂ ಜಿಲ್ಲಾ ನ್ಯಾಯಾಲಯ ಇದೇ ಪ್ರಕರಣಕ್ಕೆ ಸಂಬಂಧಿಸಿ ಪರಿಸರವಾದಿ ಪಿಯೂಷ್‌ ಮಾನುಷ್‌ ಅವರಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ನಟ ಮನ್ಸೂರ್‌ ಖಾನ್‌ಗೆ ಬೇಲ್‌ ನಿರಾಕರಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next