Advertisement

“ಕನ್ನಡತಿ’ಹೀರೋ ಈಗ ಬಹದ್ದೂರ್‌ ಗಂಡು

08:09 AM Mar 30, 2021 | Team Udayavani |

ಕಿರುತೆರೆಯ “ಕನ್ನಡತಿ’ ಧಾರಾವಾಹಿ ನಟ ಕಿರಣ್‌ ರಾಜ್‌ ಶೀಘ್ರದಲ್ಲಿಯೇ ಕಿರುತೆರೆಯಿಂದ ಬೆಳ್ಳಿತೆರೆಗೆ ಅಡಿಯಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಿರಣ್‌ ರಾಜ್‌ ಅಭಿನಯಿಸುತ್ತಿರುವ ಹೊಸಚಿತ್ರಕ್ಕೆ “ಬಹದ್ದೂರ್‌ ಗಂಡು’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ಈ ಚಿತ್ರದ ಮುಹೂರ್ತ ಕೂಡ ನೆರವೇರಿದೆ.

Advertisement

ಇನ್ನು “ಬಹದ್ದೂರ್‌ ಗಂಡು’ ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗಿದ್ದು ಗ್ರಾಮೀಣ ಸೊಗಡಿನ ಕಥೆ ಚಿತ್ರದಲ್ಲಿದೆಯಂತೆ. ಒಂದು ಹಳ್ಳಿಯ ನೂರು ವರ್ಷದ ಇತಿಹಾಸವನ್ನು ಆಧರಿಸಿ ಈ ಚಿತ್ರ ಮಾಡಲಾಗುತ್ತಿದೆಯಂತೆ.

“ಬಹದ್ದೂರ್‌ ಗಂಡು’ ಚಿತ್ರದಲ್ಲಿ ಕಿರಣ್‌ ರಾಜ್‌ಗೆ ನಾಯಕಿಯಾಗಿ ಯಶಾ ಶಿವಕುಮಾರ್‌, ನಿಸರ್ಗ ಲಕ್ಷ್ಮಣ್‌ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಕರಿಸುಬ್ಬು, ನಾಗೇಶ್‌, ಗೋವಿಂದೇಗೌಡ, ರಮೇಶ್‌ ಭಟ್‌ ಮೊದಲಾದವರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರಕ್ಕೆ ಪ್ರಸಿದ್ಧ್ ನಿರ್ದೇಶನವಿದೆ. ಒಟ್ಟಾರೆ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿರುವ ಕಿರಣ್‌ ರಾಜ್‌, ಹಿರಿತೆರೆ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದು “ಬಹದ್ದೂರ್‌ ಗಂಡು’ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next