Advertisement

‘ರಾಜಕುಮಾರ್ ಕಾಲವಾದ ದಿನ’ನೆನೆದು ಭಾವುಕರಾದ ನಟ ಜಗ್ಗೇಶ್

01:49 PM Apr 12, 2021 | Team Udayavani |

ಬೆಂಗಳೂರು: ಇಂದು ನಟಸಾರ್ವಭೌಮ ರಾಜಕುಮಾರ್ ಅವರ 15ನೇ ವರ್ಷದ ಪುಣ್ಯಸ್ಮರಣೆ. ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ವರನಟ ನಮ್ಮನ್ನು ಅಗಲಿ ಇಂದಿಗೆ 15 ವರ್ಷಗಳು ಗತಿಸಿವೆ.

Advertisement

ಮೊದಲಿನಿಂದಲೂ ದೊಡ್ಮನೆ ಕುಟುಂಬಕ್ಕೆ ಆಪ್ತರಾಗಿರುವ ನಟ ಜಗ್ಗೇಶ್, ರಾಜಕುಮಾರ ಅವರು ಕಾಲವಾದ ದಿನವನ್ನು ಇಂದು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ರಾಜಣ್ಣನ ಸಾವಿನ ಸುದ್ದಿ ಕೇಳಿ ತಮಗಾಗಿದ್ದ ನೋವನ್ನು ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ.

ಶ್ರೀರಂಗಪಟ್ಟಣದ ಕುಂತಿಬೆಟ್ಟದ ರಸ್ತೆಯಲ್ಲಿನ ಮನೆಯಲ್ಲಿ ಪಾಂಡವರು ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಅಂಬರೀಶರವರ ಅಭಿಮಾನಿ ಮನೆಯಿಂದ ಬಂದಿದ್ದ ವಿಶೇಷ ಊಟದ ಸವಿದು ಕಾರಿನಲ್ಲಿ ಅರ್ಧಗಂಟೆ ಜಗ್ಗೇಶ್ ವಿಶ್ರಾಂತಿ ಪಡೆಯುತ್ತಿದ್ದರಂತೆ. ಇದ್ದಕ್ಕಿದ್ದಂತೆ ವಾಂತಿಬಾಬು ಎಂಬುವರು ಕಾರಿನ ಕಿಟಕಿ ಜೋರಾಗಿ ತಟ್ಟಿದರಂತೆ ಇದರಿಂದ ಜಗ್ಗೇಶ್ ಅವರ ಸಿಟ್ಟು ನೆತ್ತಿಗೇರಿತಂತೆ. ಕಾರಣ ಕೇಳಲು ಬಾಗಿಲು ತೆರೆದರೆ, ವಾಂತಿಬಾಬು ಹೇಳಿದ ‘ರಾಜಣ್ಣ ಹೋಗಿಬಿಟ್ಟರು’ ಎನ್ನುವ ಮಾತು ಜಗ್ಗೇಶ್ ಅವರಿಗೆ ಬರಸಿಡಿಲಿನಂತೆ ಅಪ್ಪಳಿಸತಂತೆ.

‘ಅಣ್ಣಾವ್ರ ಸಾವಿನ ಸುದ್ದಿ ಕೇಳಿ ಕೆಲ ನಿಮಿಷ ಏನು ಕಾಣಲಿಲ್ಲಾ, ಕೇಳಲಿಲ್ಲಾ. ನನ್ನ ತಂದೆ ಸತ್ತಾಗಲು ಹಾಗೆ ಆಯಿತು. ಯಾರಿಗೂ ಹೇಳದೆ ಹೊರಟವನೆ ಅಣ್ಣನ ಚಿತಾವಾಹನ ತಲುಪಿದೆ. ಕೊನೆವರೆಗು ಜೊತೆಯಿದ್ದು ಬಾಲ್ಯದಿಂದ ಕಂಡ ರಾಜಣ್ಣನ ಪಾತ್ರ ಹಾಗು ಅವರ ಸಾಂಗತ್ಯ ಮಾತ್ರ ನೆನಪಾಗುತ್ತಿತ್ತು. ಇತಿಹಾಸ ನೆನಪಿನ ಅಂಗಳಕ್ಕೆ ಜಾರಿತು. ರಾಜಣ್ಣ ನನ್ನ ಹೃದಯದಲ್ಲೆ ಲೀನವಾದರು.ಮತ್ತೆ ಬನ್ನಿ ಅಣ್ಣ’ ಎಂದು ಜಗ್ಗೇಶ್ ಅವರು ಭಾವುಕತೆಯಿಂದ ಟ್ವಿಟ್ ಮಾಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next