Advertisement

ಚಿರು ಮಗುವಿಗಾಗಿ ಬೆಳ್ಳಿತೊಟ್ಟಿಲು ಖರೀದಿಸಿದ ಧ್ರುವ ಸರ್ಜಾ

01:08 PM Oct 21, 2020 | Suhan S |

ಸರ್ಜಾ ಕುಟುಂಬ ಪುಟ್ಟಕಂದಮ್ಮನ ನಿರೀಕ್ಷೆಯಲ್ಲಿದೆ. ಮೇಘನಾ ರಾಜ್‌ ಹೊಟ್ಟೆಯಲ್ಲಿ ಮತ್ತೆ ಚಿರಂಜೀವಿ ಸರ್ಜಾ ಹುಟ್ಟಿ ಬರಲಿದ್ದಾರೆಂಬ ನಿರೀಕ್ಷೆಯಲ್ಲಿ ಎದುರು ನೋಡುತ್ತಿದೆ.  ಈ ನಡುವೆಯೇ ಮನೆಗೆ ಬರುವ ಹೊಸ ಅತಿಥಿಗಾಗಿ ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ.

Advertisement

ಹೌದು, ನಟ ಧ್ರುವ ಸರ್ಜಾ ಸಹೋದರ ಚಿರಂಜೀವಿ ಸರ್ಜಾ ಮಗುವಿಗಾಗಿ ಹತ್ತು ಲಕ್ಷ ಮೌಲ್ಯದ ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ. ಈ ಮೂಲಕ ಮನೆಗೆ ಬರಲಿರುವ ಅತಿಥಿಗೆ ಅದ್ಧೂರಿ ಸ್ವಾಗತಕೊರಲು ಅಣಿಯಾಗಿದ್ದಾರೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋ ವೈರಲ್‌ ಆಗಿದ್ದು, ಧ್ರುವ ಸರ್ಜಾ ಅವರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇನ್ನು, ಚಿರಂಜೀವಿ ಸರ್ಜಾ ಅವರ ತಾಯಿ ಮಗುವಿಗಾಗಿ ಚಿನ್ನದ ಬಟ್ಟಲು ಖರೀದಿಸಿದ್ದಾರೆ ಎನ್ನಲಾಗಿದೆ. ಸದ್ಯ ಸರ್ಜಾ ಕುಟುಂಬ ಚಿರಂಜೀವಿ ಸರ್ಜಾ ಅವರ ಮಗುವಿನ ನಿರೀಕ್ಷೆಯಲ್ಲಿದೆ.­

ರಾಜತಂತ್ರದಲ್ಲಿ ರಾಘಣ್ಣ ಬಿಝಿ :

ಹಿರಿಯ ನಟ ರಾಘವೇಂದ್ರ ರಾಜಕುಮಾರ್‌ ಅಭಿನಯದ ಹೊಸಚಿತ್ರ “ರಾಜತಂತ್ರ’ದ ಚಿತ್ರೀಕರಣ ಅದ್ಧೂರಿಯಾಗಿ ನಡೆಯುತ್ತಿದೆ. ಒಂದೇ ಹಂತದಲ್ಲಿ “ರಾಜತಂತ್ರ’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಲು ಪ್ಲಾನ್‌ ಹಾಕಿಕೊಂಡಿರುವ ಚಿತ್ರತಂಡ, ಸದ್ಯ ಬಿಡುವಿಲ್ಲದೆ ಚಿತ್ರೀಕರಣದಲ್ಲಿ ನಿರತವಾಗಿದೆ.

“ಅಮ್ಮನ ಮನೆ’ ಚಿತ್ರದ ನಂತರ ರಾಘವೇಂದ್ರ ರಾಜಕುಮಾರ್‌ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, ಚಿತ್ರದಲ್ಲಿ ರಾಘಣ್ಣ ನಿವೃತ್ತ ಯೋಧನ ಪಾತ್ರದಲ್ಲಿಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆಹಿರಿಯ ನಟ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಹಿರಿಯ ನಟಿ ಭವ್ಯಾ, ಶಂಕರ್‌ ಅಶ್ವತ್‌, ನೀನಾಸಂ ಅಶ್ವತ್‌, ಮುನಿರಾಜು ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. “ವಿಶ್ವಂ ಡಿಜಿಟಲ್‌ ಮೀಡಿಯಾ’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಜೆ.ಎಂ ಪ್ರಹ್ಲಾದ್‌ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಪಿ.ವಿ.ಆರ್‌. ಸ್ವಾಮಿ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ನಾಗೇಶ್‌ ಸಂಕಲನ ಕಾರ್ಯವಿದೆ. ಹಾಡುಗಳಿಗೆ ಸಿ. ಸುರೇಶ್‌ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ವೈಲೆಂಟ್‌ ವೇಲು, ರಾಮದೇವ್‌ ಸಾಹಸವಿದೆ. ­

Advertisement

 

Advertisement

Udayavani is now on Telegram. Click here to join our channel and stay updated with the latest news.

Next