Advertisement

ತಮಿಳುನಾಡಿನ ಶನಿದೇವರ ದರ್ಶನ ಪಡೆದ ನಟ ದರ್ಶನ್  

06:27 PM Jul 24, 2021 | Team Udayavani |

ಚೆನ್ನೈ :  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪಾಂಡಿಚೆರಿಯಲ್ಲಿರುವ ತಿರುನಲ್ಲಾರ್ ನಲ್ಲಿರುವ ಶನಿದೇವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದ್ದಾರೆ.

Advertisement

ದರ್ಶನ್ ಅವರತ್ತ ಒಂದಿಲ್ಲೊಂದು ವಿವಾದಗಳು ಹರಿದು ಬರುತ್ತಿವೆ. ಲಾಕ್ ಡೌನ್ ತೆರವಾಗಿ ಶೂಟಿಂಗ್ ನಲ್ಲಿ ಪಾಲ್ಗೊಳ್ಳಬೇಕೆನ್ನುವಷ್ಟರಲ್ಲಿ 25 ಕೋಟಿ ರೂ. ಸಾಲಕ್ಕೆ ಶ್ಯೂರಿಟಿ ಪ್ರಕರಣ ಬೆಳಕಿಗೆ ಬಂತು. ಇದಕ್ಕೆ ಸ್ವತಃ ದರ್ಶನ್ ಅವರೇ ಅಂತ್ಯ ಹೇಳುವ ಪ್ರಯತ್ನ ಮಾಡಿದರು. ಇದಾದ ಬಳಿಕ ಮೈಸೂರಿನ ಹೋಟೆಲ್ ನಲ್ಲಿ ದಲಿತ ವೇಟರ್ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂದು ಪತ್ರಕರ್ತ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದರು.

ಇಂದ್ರಜಿತ್ ಲಂಕೇಶ್ ಹಾಗೂ ದರ್ಶನ್ ಅವರ ನಡುವಿನ ಮಾತಿನ ಚಕಮಕಿ ಸಭ್ಯ ಭಾಷೆಯನ್ನು ಮೀರುವಂತಾಯಿತು. ಲಂಕೇಶ್ ವಿರುದ್ಧ ಆಕ್ರೋಶದಿಂದ ಮಾತನಾಡುತ್ತಿದ್ದ ಸಂದರ್ಭದಲ್ಲಿ ನಿರ್ಮಾಪಕ ಉಮಾಪತಿ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಅವರ ಹೆಸರು ಕೇಳಿ ಬಂತು. ದರ್ಶನ್ ಅವರು ಪ್ರೇಮ್ ಏನ್ ದೊಡ್ಡ ಪುಡುಂಗ್ ನಾ ? ಎಂದು ನುಡಿದಿದ್ದು ಮತ್ತೊಂದು ವಿವಾದಕ್ಕೆ ಕಾರಣವಾಯ್ತು.

ಹೀಗೆ ಸಾಲು ಸಾಲು ವಿವಾದಗಳು ಬೆನ್ನು ಬಿದ್ದಿದ್ದರಿಂದ ನೆಮ್ಮದಿ ಪಡೆಯೆಂದು ಸ್ನೇಹಿತರೊಂದಿಗೆ ದರ್ಶನ್ ತಮಿಳು ನಾಡಿಗೆ ಹೋಗಿದ್ದಾರೆ. ಅಲ್ಲಿರುವ ಶನಿದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next